ದಿಂಡುಕ್ಕಲ್ ಬೆಟ್ಟ ದಿಂಡುಕ್ಕಲ್ ಎಂಬ ಹೆಸರಿನಿಂದಲೇ ಇರುವ ನಗರದ ಪ್ರಮುಖ ಸ್ಥಳಗಳಲ್ಲೊಂದು. ಇದರ ಅರ್ಥ ದಿಂಡು ಎಂದರೆ ದಿಂಬು ಮತ್ತು ಕಲ್ ಎಂದರೆ ಕಲ್ಲು ಎಂದಾಗಿದೆ. ನಗರದಿಂದ ಇದನ್ನು ನೋಡಲು ದಿಂಬಿನ ರೀತಿ ಕಾಣಿಸುವುದರಿಂದ ಇದನ್ನು ಈ ಹೆಸರಿನಿಂದ ಕರೆಯಲಾಯಿತು. ಈ ಬೆಟ್ಟದ ಮೇಲೆಯೇ ದಿಂಡುಕ್ಕಲ್ ಕೋಟೆಯಿದೆ . ಈ...
ದಿಂಡುಕಲ್ ಬೆಟ್ಟದ 280 ಅಡಿ ಎತ್ತರದಲ್ಲಿರುವ ದಿಂಡುಕಲ್ ಕಲ್ಲಿನ ಕೋಟೆ ಮಹತ್ವದ ಐತಿಹಾಸಿಕ ಹೆಗ್ಗುರುತಾಗಿದೆ. ಮಧುರೈ ರಾಜವಂಶದ ಮುತ್ತು ಕೃಷ್ಣ ನಾಯ್ಕರ್ನಿಂದ ಇದು 17 ನೆ ಶತಮಾನದಲ್ಲಿ ಕಟ್ಟಲಾಯಿತು.ನಂತರ ಇದನ್ನು ಸಾಕಷ್ಟು ರಾಜರು ಆಕ್ರಮಿಸಿದರು. 18 ನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಇದನ್ನು ಆಳ್ವಿಕೆ ನಡೆಸಿ ಆತ ಸೋತ...
ಈ ದೇವಸ್ಥಾನದಲ್ಲಿ ಅಬಿರಾಮಿ ಅಮ್ಮನ ಪೂಜೆ ನಡೆಯುತ್ತದೆ. ನಗರದ ಮಧ್ಯದಲ್ಲಿರುವ ಈ ದೇವಸ್ಥಾನಕ್ಕೆ ನವರಾತ್ರಿಯಲ್ಲಿ ಭಕ್ತರು ಗುಂಪು ಗುಂಪಾಗಿ ಸೇರುತ್ತಾರೆ. ನವರಾತ್ರಿ ಸಂಧರ್ಭದಲ್ಲಿ ಗೊಂಬೆಗಳನ್ನು ಇಡಲಾಗುತ್ತದೆ. ಈ ದೇವಸ್ಥಾನದಲ್ಲಿ ಪುರೋಹಿತರು 1 ಲಕ್ಷ ಅರ್ಚನೆಯನ್ನು ಅರ್ಪಿಸುತ್ತಾರೆ. ತಮಿಳು ಆದಿ ಮಾಸದಲ್ಲಿ ಪ್ರತಿ...
1866 ರಿಂದ 1872 ರ ಅವಧಿಯಲ್ಲಿ ಈ ಚರ್ಚ್ ಅನ್ನು ಕತ್ತಲಾಯಿತು. 100 ವರ್ಷದ ಹಿಂದಿನ ಈ ಚರ್ಚ್ ದಿಂಡುಕ್ಕಲ್ ನ ರೋಮನ್ ಕ್ಯಾಥೊಲಿಕ್ ಚರ್ಚ್ ನಲ್ಲಿ ಮುಖ್ಯವಾದುದಾಗಿದೆ ಮತ್ತು ಈ ಧರ್ಮದ ಮುಖ್ಯ ಧಾರ್ಮಿಕ ಸ್ಥಳವಾಗಿದೆ.
ನಿಳಕೊತ್ತೈ ತಾಲೂಕಿನ ಅನಕೊತ್ತೈ ಎಂಬಲ್ಲಿ ಈ ದೇವಸ್ಥಾನವಿದೆ. ಈ ದೇವಸ್ಥಾನ ಮುಖ್ಯ ದೇವಸ್ಥಾನಗಳಲ್ಲಿ ಒಂದಾಗಿದ್ದು 300 ವರ್ಷ ಹಳೆಯದು ಎನ್ನಲಾಗಿದೆ. ಮಧುರೈ ನ ರಾಣಿ ಮಂಗಮ್ಮಳಿಂದ ಕಟ್ಟಲಾಯಿತು ಎನ್ನಲಾಗಿದೆ. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಕಟ್ಟಲಾದ ಪೆರನೈ ಸೇತುವೆಯ ಹತ್ತಿರ ಈ ದೇವಸ್ಥಾನವಿದೆ. ನೀರಿನ ಮಟ್ಟ...
ಈ ದೇವಸ್ಥಾನ ದಿಂಡುಕ್ಕಲ್ ನಿಂದ 5 ಕಿ ಮೀ ದೂರದಲ್ಲಿರುವ ದಿಂಡುಕ್ಕಲ್ ಮತ್ತು ಕರೂರ್ ಮಾರ್ಗದಲ್ಲಿದೆ. ಇಲ್ಲಿನ ಪ್ರಮುಖ ದೇವರು ಅಳಗರ . ದೇವಸ್ಥಾನದ ಮುಖ್ಯ ಆಚರಣೆ ಏಪ್ರಿಲ್ ಮತ್ತು ಮೇ ಯಲ್ಲಿ ಬರುವ ತಮಿಳಿನ ಮಾಸವಾದ ಚಿತ್ರೈ ಮಾಸದಲ್ಲಿ. ಈ ಆಚರಣೆ ಸಂಧರ್ಭಗಲ್ಲಿ 12 ದಿನದ ನಿತ್ಯ ಪೂಜೆ ದೇವರಿಗೆ ಮಾಡಲಾಗುತ್ತದೆ.
ಇದನ್ನು ಹೈದರಾಲಿ ಆಡಳಿತ ಕಾಲದಲ್ಲಿ ಕಟ್ಟಲಾಯಿತು ಮತ್ತು ಇದು 300 ವರ್ಷ ಹಳೆಯದು. ಹೈದರಾಲಿಯ ಕಿರಿಯ ತಂಗಿ ಆಮೀರ್ -ಉನ್ -ನಿಶಾ ಬೇಗಂ ದೇಹವನ್ನು ಇಲ್ಲಿ ಸುಡಲಾಯಿತು. ದಿಂಡಿಕ್ಕಲ್ ನಲ್ಲಿ ಬೇಗಂಬುರ್ ಎಂದು ಆಕೆಯನ್ನು ಪ್ರೀತಿಯಿಂದ ಕರೆಯಲಾಗುತ್ತಿತ್ತು ಆದ್ದರಿಂದ ಆಕೆಯ ಹೆಸರೇ ಈ ಮಸೀದಿ ಗೆ ಇಡಲಾಗಿದೆ.
ಕಾಮರಾಜ ಸರೋವರ ಮತ್ತು ಕಾಮರಾಜ ಸಾಗರ ಡ್ಯಾಮ್ ಅತ್ಹುರ್ ಎಂಬ ಹಳ್ಳಿಯಲ್ಲಿದೆ. ಇದು 400 ಎಕರೆ ವ್ಯಾಪಿಸಿದೆ ಮತ್ತು ಪಶ್ಚಿಮ ಘಟ್ಟಗಳನ್ನು ಕಾಣಬಹುದು. ಈ ಸರೋವರ ಮತ್ತು ಡ್ಯಾಮ್ ಗೆ ಸಂಬಂಧಪಟ್ಟ ಜಾಗದಲ್ಲಿ ಬಾಳೆ, ತೆಂಗಿನ ಮರಗಳು, ಏಲಕ್ಕಿ ಎಸ್ಟೇಟ್ಗಳನ್ನೂ ಕಾಣಬಹುದು. ಸಾವಿರಾರು ಪಕ್ಷಿ ಪ್ರಭೇದಗಳು ಇಲ್ಲಿ ಬಂದು...
ಈ ದೇವಸ್ಥಾನ ಮಾರಿಯಮ್ಮನ ದೇವಸ್ಥಾನವಾಗಿದೆ. ಟಿಪ್ಪು ಸುಲ್ತಾನ್ದಿಂದ ಕಟ್ಟಲಾದ 200 ವರ್ಷ ಹಳೆಯ ದೇವಸ್ಥಾನ ಎನ್ನಲಾಗಿದೆ. ಇಲ್ಲಿ ವಿನಾಯಕ, ಕಾಳಿ, ದುರ್ಗಿ, ಮಧುರೈ ವೀರ, ಮುರುಗನ ಗುಡಿಗಳು ಇವೆ. ಚೌಕಾಕಾರದಲ್ಲಿ ದೇವಸ್ಥಾನವನ್ನು ಕಟ್ಟಲಾಗಿದೆ. ಟ್ರಸ್ಟ್ ನವರು ಇದರ ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ.
ಕೊಡೈಕೆನಾಲ್ ನಲ್ಲಿ ಈ ಚರ್ಚ್ ಇದೆ. ಇದನ್ನು ಗ್ರಾನೈಟ್ ನಲ್ಲಿ ಕಟ್ಟಲಾಗಿದೆ . ಗಾಜಿನ ಕಿಟಕಿಗಳು ಮತ್ತು ಕಳೆಯ ಕೆಲಸ ಹೊಂದಿರುವ ಈ ಚರ್ಚ್ ವಸಾಹತು ವಾಸ್ತುಶಿಲ್ಪದ ಪ್ರಭಾವ ಹೊಂದಿರುವುದು ಕಾಣಬಹುದು. ಈ ಚರ್ಚ್ ಪ್ರವಾಸಿ ಮುಖ್ಯ ಕೇಂದ್ರಗಳಲ್ಲಿ ಒಂದಾಗಿದೆ.
ಚಿನ್ನಳಪಟ್ಟಿ ದಿಂಡುಕ್ಕಲ್ ಜಿಲ್ಲೆಯ್ ನ ಸಣ್ಣ ನಗರ. ಈ ನಗರದಲ್ಲಿ ನೋಡಲು ವೇದಿಪತ್ತಿ ಮಾತಾ ಮಂದಿರ , ಅತ್ಹುರ್ ಕಾಮರಾಜ ಸಾಗರ, ಸಿರುಮಲ್ಲೈ ಬೆಟ್ಟ, ಕುತ್ಳದಂಪಟ್ಟಿ ಜಲಪಾತ, ಅತ್ಹಿಸಯ ಥೀಮ್ ಪಾರ್ಕ್ ಮತ್ತು ಸಾಕಷ್ಟು ರೆಸಾರ್ಟ್ ಗಳನ್ನೂ ವೀಕ್ಷಿಸಬಹುದು. ಅಳಗರ ಹಬ್ಬವು ಸಾಕಷ್ಟು ಜನರನ್ನು ಈ ನಗರಕ್ಕೆ ಕರೆತರುತ್ತದೆ.