ಖುಷೇಶ್ವರ ಆಸ್ಥಾನವು ಖುಷೇಶ್ವರಾಸ್ಥಾನ ಎನ್ನುವ ಶಿವನ ದೇವಾಲಯಕ್ಕೆ ಪ್ರಸಿದ್ಧವಾದ ಧಾರ್ಮಿಕ ಸ್ಥಳ. ವರ್ಷಪೂರ್ತಿ ಯಾತ್ರಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೊಂದು ಪುರಾತನ ದೇವಾಲಯ.
ಶ್ಯಾಮ ಕಾಳಿ ದೇವಾಲಯವು ಹಿಂದೂಗಳ ಧಾರ್ಮಿಕ ಸ್ಥಳ. ಇದು ತನ್ನ ಸೌಂದರ್ಯಕ್ಕೆ ಪ್ರಸಿದ್ಧವಾಗಿದೆ. ಈ ದೇವಾಲಯವು ದರ್ಬಾಂಗಿನ ಲಲಿತ ನಾರಾಯಣ ಮಿಥಿಲ ವಿಶ್ವವಿದ್ಯಾಲಯದ ಸಮೀಪದಲ್ಲಿದೆ.
ಮನೋಕಾಮನ ದೇವಾಲಯವು ನರ್ಗೌನ ಅರಮನೆಯ ಪಕ್ಕದಲ್ಲಿರುವ ವಿಶ್ವವಿದ್ಯಾಯದ ಕ್ಯಾಂಪಸ್ ಪಕ್ಕದಲ್ಲಿದೆ. ಮನೋಕಾಮನ ವಿಗ್ರಹವು ಮೊದಲಿಗೆ ಹನುಮಂತನ ದೇವಾಲಯ. ಈ ದೇವಾಲಯವು ಇಲ್ಲಿಗೆ ಭೇಟಿ ನೀಡುವ ಅಸಂಖ್ಯ ಪ್ರವಾಸಿಗರಿಗೆ ಆತಿಥ್ಯವನ್ನು ಒದಗಿಸುತ್ತದೆ.
ಅಹಿಲ್ಯಾ ಆಸ್ಥಾನವು ಗೌತಮ ಋಷಿಯ ಪತ್ನಿ ಅಹಲ್ಯೆಗಾಗಿ ಕಟ್ಟಿರುವ ಇತಿಹಾಸ ಪ್ರಸಿದ್ಧ ದೇವಾಲಯ. ಈ ದೇವಾಲಯವು ಅಹಲ್ಯಾ ಗ್ರಾಮ ಎಂದು ಕೂಡ ಪ್ರಸಿದ್ಧವಾಗಿದೆ. ರಾಮಾಯಣದ ಪ್ರಕಾರ ರಾಮನು ಜನಕಪುರಕ್ಕೆ ಹೋಗುವ ಹಾದಿಯಲ್ಲಿ ಅವನ ಪಾದದ ಸೋಂಕಿನಿಂದ ಅಹಲ್ಯೆ ಹುಟ್ಟಿದಳಂತೆ. ನಂತರ ಅಹಲ್ಯೆಯು ತನ್ನ ಪತಿ ಗೌತಮ ಋಷಿಯ ಶಾಪದಿಂದ ಕಲ್ಲಾದಳು....
ಚಂದ್ರಧಾರಿ ಸಂಗ್ರಹಾಲಯವು ಇಲ್ಲಿನ ಕುಶಲಕಲೆ ಮತ್ತು ಗ್ರಂಥಾಲಯ ಸೌಲಭ್ಯಕ್ಕೆ ಹೆಸರುವಾಸಿಯಾಗಿದೆ. ಹಲವು ಪ್ರವಾಸಿಗರು ಈ ಸ್ಥಳಕ್ಕೆ ಈ ಪ್ರದೇಶ ಕುರಿತಾದ ಪ್ರಾಥಮಿಕ ಮಾಹಿತಿಗಳನ್ನು ಪಡೆಯಲು ಬರುತ್ತಾರೆ.
ಖುಷೇಶ್ವರನಾಥ ಬ್ಲಾಕಿನಲ್ಲಿನ ನೀರು 14 ಹಳ್ಳಿಗಳಿಗೆ ನೀರನ್ನು ಒದಗಿಸುವುದರೊಂದಿಗೆ ವಿವಿಧ ಬಗೆಯ ಸಸ್ಯ ಮತ್ತು ಜೀವ ವೈವಿಧ್ಯವನ್ನು ಹೊಂದಿದೆ. ಈ ಪ್ರದೇಶವನ್ನು “ಖುಷೇಶ್ವರನಾಥನ್ ಪಕ್ಷಿಧಾಮ” ಎಂದು ಘೋಷಿಸಲಾಗಿದೆ. ದಲ್ಮಾಟಿಯನ್ ಪೆಲಿಕಾನ್, ಇಂಡಿಯನ್ ಡಾರ್ಟರ್, ಹೆಬ್ಬಾತು ಮತ್ತು ಬಾತುಕೋಳಿಗಳನ್ನು ಇಲ್ಲಿ...
ಮಹಾರಾಜ ಲಕ್ಷ್ಮೀಶ್ವರ ಸಿಂಗ್ ವಸ್ತುಸಂಗ್ರಹಾಲಯವು 1977ರಲ್ಲಿ ಸ್ಥಾಪನೆಗೊಂಡಿತು. ಇಲ್ಲಿ ಚಿನ್ನ, ಬೆಳ್ಳಿ, ಶ್ರೀಗಂಧ ಮತ್ತು ಟಸ್ಕರ್ ಹಲ್ಲಿನ ಅಪರೂಪದ ಅಸಂಖ್ಯ ವಸ್ತುಗಳು ಮತ್ತು ಆಯುಧಗಳಿವೆ. ಈ ಎಲ್ಲ ಸಂಗ್ರಹವನ್ನು 8 ವಿವಿಧ ಚೇಂಬರ್ಗಳಲ್ಲಿ ವೈಜ್ಞಾನಿಕವಾಗಿ ಜೋಡಿಸಲಾಗಿದೆ. ಇಲ್ಲಿ ಮಹಾರಾಜ ರಾಮೇಶ್ವರ ಸಿಂಗನ ಚಿನ್ನ,...
ಕ್ಯಾಥೊಲಿಕ್ ಚರ್ಚ್ 1891ರಲ್ಲಿ ಕಟ್ಟಲ್ಪಟ್ಟಿತು. ಇದರ ಮೂಲಕಟ್ಟಡವು 1897ರಲ್ಲಿ ಭೂಕಂಪದಲ್ಲಿ ಧ್ವಂಸವಾಯಿತು. ಇದನ್ನು ಮತ್ತೆ ಪುನರ್-ನಿರ್ಮಿಸಲಾಯಿತು. ಈ ಚರ್ಚ್ ಹೋಲಿ ರೋಸರಿ ಚರ್ಚ್ ಎಂದು ಕೂಡ ಪ್ರಸಿದ್ಧವಾಗಿದೆ. ಶುಕ್ರವಾರಗಳಂದು ಇಲ್ಲಿ ಚರ್ಚ್ನ ಅಭ್ಯಾಸಿಗಳು ಮತ್ತು ಪ್ರವಾಸಿಗರು ಸೇರುತ್ತಾರೆ. ಡಿಸಂಬರ್ನಲ್ಲಿ ನಡೆಯುವ...
ಮಹಿನಂ-ಮಹದೇವ್-ಸ್ಥಾನದಲ್ಲಿ ಶಿವನ ದೇವಾಸ್ಥಾನವಿದ್ದು ದರ್ಬಾಂಗ್-ಬಿರೌಲ್ ಪುಕ್ಕ ರಸ್ತೆಯಿಂದ 5ಕಿಮೀ ದೂರದಲ್ಲಿದೆ. ಕಾರ್ತಿಕ ಮತ್ತು ಮಾಘಿ ಪೂರ್ಣಿಮಗಳಲ್ಲಿ ಇಲ್ಲಿ ವಾರ್ಷಿಕ ಮೇಳಗಳು ನಡೆಯುತ್ತವೆ.
ಸತಿ ಆಸ್ಥಾನವು ದರ್ಬಾಂಗಿನ ಮಹಾರಾಜ ಅಣೆಕಟ್ಟಿನಿಂದ 1 ಕಿಮೀ ದೂರದಲ್ಲಿರುವ ಸುಭಂಕರ್ಪುರದಲ್ಲಿನ ಸಮಾಧಿ. ಇದು ರಾಮೇಶ್ವರ ಸಿಂಗ್ ಎನ್ನುವ ಪ್ರಸಿದ್ಧ ತಾಂತ್ರಿಕನ ಸಮಾಧಿ. ಇಲ್ಲಿಗೆ ಜನ ಮಧ್ಯರಾತ್ರಿಯಲ್ಲಿ ಅವನ ತಾಂತ್ರಿಕ ಸಿದ್ಧಿಯನ್ನು ಗಳಿಸಿಕೊಳ್ಳುವ ಸಲುವಾಗಿ ಬರುತ್ತಾರೆ. ಪ್ರತಿ ಸೋಮವಾರ ಮತ್ತು ಶುಕ್ರವಾರಗಳಂದು ಜನ...
ಮಲೆಚಚ್ಚೆದ್ ಮರ್ದಾನಿ ದೇವಾಲಯವು ನೈಋತ್ಯ ದರ್ಬಾಂಗ್ ರೈಲ್ವೇ ನಿಲ್ದಾಣದಿಂದ 1 ಕಿಮೀ ದೂರದಲ್ಲಿದೆ. ಶಕ್ತಿ ಪಂಥದ ಭಕ್ತರಿಗೆ ಈ ದೇವಾಲಯವು ಮುಖ್ಯವಾದುದು.
ಭಿಖ ಸಲಾಮಿ ಮಜರ್ ಗಂಗಸಾಗರ ಕೊಳದ ದಂಡೆಯಲ್ಲಿದೆ. ರಂಜಾನ್ ತಿಂಗಳ 12 ಮತ್ತು 16ನೇ ದಿನಗಳಂದು ಇಲ್ಲಿ ಜಾತ್ರೆ ನಡೆಯುತ್ತದೆ.
ಮಖದೂಮ್ ಬಾಬ ಮಜರ್ವು ಒಂದು ಭಿನ್ನವಾದ ಸ್ಥಳ. ಇದು ಹಿಂದೂ-ಮುಸ್ಲಿಂ ಸಾಮರಸ್ಯದ ಧಾರ್ಮಿಕ ಮಹತ್ವದ ಸ್ಥಳ. ಪ್ರತಿದಿನವೂ ಇಲ್ಲಿಗೆ ಎರಡೂ ಧರ್ಮಗಳ ಜನ ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ.
ನವಾಧ ದುರ್ಗಾ ಸ್ಥಾನದಲ್ಲಿ ದುರ್ಗಾ ದೇವಾಲಯವಿದ್ದು ಇದು ಮಜ್ಕೊರ ನವಾಧ ರಸ್ತೆಯಲ್ಲಿದೆ. ಪ್ರತಿದಿನ ಇಲ್ಲಿಗೆ ನೂರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ದಸರಾ ಹಬ್ಬವನ್ನು ಭಕ್ತಿ ಮತ್ತು ಉತ್ಸಾಹಗಳೊಂದಿಗೆ ಆಚರಿಸಲಾಗುತ್ತದೆ.
ರಘೋಪುರವು ಸಕ್ರಿ ರೈಲ್ವೇ ನಿಲ್ದಾಣದಿಂದ 5 ಕಿಮೀ ದೂರದಲ್ಲಿದೆ. ಇದು ಶಿಯೋಸಿಂಗ್-ಗರ್ ಎನ್ನುವ ಮಣ್ಣಿನ ದಿಬ್ಬದಿಂದ ಹೆಸರುವಾಸಿಯಾಗಿದೆ. ಈ ದಿಬ್ಬವು ರಾಜ ಶಿವ ಸಿಂಗನು ಕಟ್ಟಿದ ಕಟ್ಟಡದ ಅವಶೇಷಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ.