ಕಾಳಿ ದೇವಿಯ ಕಮಲೇಶ್ವರಿ ಮಂದಿರವು ತ್ರಿಪುರದ ಬಹುದೊಡ್ಡ ಪಟ್ಟಣವಾದ ಕಮಲಪುರದಲ್ಲಿದೆ. ಇದು ಧಲೈನ ಮುಖ್ಯ ಜಿಲ್ಲಾ ಕೇಂದ್ರವಾದ ಅಂಬಾಸ್ಸಾದಿಂದ 35 ಕಿಮೀ ದೂರದಲ್ಲಿದೆ. ಅಗರತಲದಿಂದ 122 ಕಿಮೀ ದೂರದಲ್ಲಿದೆ.
ಕಮಲೇಶ್ವರಿ ಎನ್ನುವುದು ಕಾಳಿ ದೇವಿಯ ಮತ್ತೊಂದು ಹೆಸರು. ಈ ದೇವಾಲಯದಿಂದ ಈ ಪಟ್ಟಣಕ್ಕೆ ಕಮಲಪುರವೆಂದು ಹೆಸರು. ವರ್ಷಪೂರಾ ಈ ದೇವಾಲಯಕ್ಕೆ ಭಕ್ತಾದಿಗಳು ಬರುತ್ತಿರುತ್ತಾರೆ. ಈ ದೇವಾಲಯಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಸೆಪ್ಟಂಬರ್ ಮತ್ತು ಮೇ ತಿಂಗಳು. ಈ ಸಮಯದಲ್ಲಿ ಮಳೆ ಕಡಿಮೆಯಾಗಿರುವುದರಿಂದ ದೇವಾಲಯಕ್ಕೆ ಸುಲಭವಾಗಿ ಬರಬಹುದು.
ಅಗರ್ತಲಾದಿಂದ ಪ್ರವಾಸಿಗರು ಟ್ಯಾಕ್ಸಿಗಳ ಮೂಲಕ ಇಲ್ಲಿಗೆ ಬರಬಹುದು. ಬಸ್ಸಿನಲ್ಲಿ ಅಂಬಸ್ಸಾಗೆ ಬಂದು ಅಲ್ಲಿಂದ ಕಮಲಪುರಕ್ಕೆ ಬರಬಹುದು. ಕಮಲಪುರದಲ್ಲಿ ರೈಲು ನಿಲ್ದಾಣವಿಲ್ಲ. ಇಲ್ಲಿಗೆ ಹತ್ತಿರದ ರೈಲು ಮತ್ತು ವಿಮಾನ ನಿಲ್ದಾಣ ಅಗರತಲದಲ್ಲಿದೆ.