ಕಾಳಿ ದೇವಿಯ ಕಮಲೇಶ್ವರಿ ಮಂದಿರವು ತ್ರಿಪುರದ ಬಹುದೊಡ್ಡ ಪಟ್ಟಣವಾದ ಕಮಲಪುರದಲ್ಲಿದೆ. ಇದು ಧಲೈನ ಮುಖ್ಯ ಜಿಲ್ಲಾ ಕೇಂದ್ರವಾದ ಅಂಬಾಸ್ಸಾದಿಂದ 35 ಕಿಮೀ ದೂರದಲ್ಲಿದೆ. ಅಗರತಲದಿಂದ 122 ಕಿಮೀ ದೂರದಲ್ಲಿದೆ.
ಕಮಲೇಶ್ವರಿ ಎನ್ನುವುದು ಕಾಳಿ ದೇವಿಯ ಮತ್ತೊಂದು ಹೆಸರು. ಈ ದೇವಾಲಯದಿಂದ ಈ ಪಟ್ಟಣಕ್ಕೆ ಕಮಲಪುರವೆಂದು ಹೆಸರು. ವರ್ಷಪೂರಾ ಈ ದೇವಾಲಯಕ್ಕೆ ಭಕ್ತಾದಿಗಳು ಬರುತ್ತಿರುತ್ತಾರೆ. ಈ ದೇವಾಲಯಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಸೆಪ್ಟಂಬರ್ ಮತ್ತು ಮೇ ತಿಂಗಳು. ಈ ಸಮಯದಲ್ಲಿ ಮಳೆ ಕಡಿಮೆಯಾಗಿರುವುದರಿಂದ ದೇವಾಲಯಕ್ಕೆ ಸುಲಭವಾಗಿ ಬರಬಹುದು.
ಅಗರ್ತಲಾದಿಂದ ಪ್ರವಾಸಿಗರು ಟ್ಯಾಕ್ಸಿಗಳ ಮೂಲಕ ಇಲ್ಲಿಗೆ ಬರಬಹುದು. ಬಸ್ಸಿನಲ್ಲಿ ಅಂಬಸ್ಸಾಗೆ ಬಂದು ಅಲ್ಲಿಂದ ಕಮಲಪುರಕ್ಕೆ ಬರಬಹುದು. ಕಮಲಪುರದಲ್ಲಿ ರೈಲು ನಿಲ್ದಾಣವಿಲ್ಲ. ಇಲ್ಲಿಗೆ ಹತ್ತಿರದ ರೈಲು ಮತ್ತು ವಿಮಾನ ನಿಲ್ದಾಣ ಅಗರತಲದಲ್ಲಿದೆ.


Click it and Unblock the Notifications