ದಾಂಡೇಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯೆಂದರೆ ದಾಂಡೇಲಿ ವನ್ಯಜೀವಿ ನಿಸರ್ಗಧಾಮ. ಇಲ್ಲಿನ ನಿರ್ದಿಷ್ಟ ಪ್ರದೇಶವನ್ನು ದಾಂಡೇಲಿ ವನ್ಯಜೀವಿ ಧಾಮವೆಂದು 1956 ಮೇ 10 ರಂದು ಘೋಷಿಸಲಾಯಿತು. ನಂತರ 2006 ರಲ್ಲಿ ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು.ಇಲ್ಲಿನ ವನ್ಯಜೀವಿ ನಿಸರ್ಗಧಾಮದಲ್ಲಿ...
ದಾಂಡೇಲಿಯಿಂದ 12 ಕಿ.ಮೀ. ದೂರದಲ್ಲಿರುವ ಕುಳಗಿ ನೈಸರ್ಗಿಕ ಶಿಬಿರಕ್ಕೆ ಪ್ರವಾಸಿಗರು ಭೇಟಿ ನೀಡಬಹುದು. ಇಲ್ಲಿಗೆ ಬರುವ ಪ್ರವಾಸಿಗರಿಗೆ ಟೆಂಟ್ ನಲ್ಲಿ ವಸತಿ ಮಾಡುವ ವ್ಯವಸ್ಥೆ ಇದೆ. ಇಲ್ಲಿ ಹನ್ನೆರಡು ಟೆಂಟ್ ಗಳಿದ್ದು ತಮಗಿಷ್ಟವಾದ ಟೆಂಟ್ ನ್ನು ಪ್ರವಾಸಿಗರು ಬಾಡಿಗೆಗೆ ಪಡೆದುಕೊಳ್ಳಬಹುದು. ಈ ಟೆಂಟ್ ಗಳಿಗೆ ಹಲವಾರು ಪಕ್ಷಿಗಳ...
ಶಿರೋಲಿ ಶಿಖರವು ದಾಂಡೇಲಿಯಿಂದ 25 ಕಿ.ಮೀ. ದೂರದಲ್ಲಿದೆ. ಸಹ್ಯಾದ್ರಿ ಬೆಟ್ಟಗಳ ಸಾಲನ್ನು ಶಿರೋಳಿ ಶಿಖರದ ತುದಿಯಲ್ಲಿ ನೋಡಬಹುದು. ಉತ್ತರ ಕನ್ನಡ ಜಿಲ್ಲೆಯಲ್ಲೇ ಅತೀ ಹೆಚ್ಚಿನ ಎತ್ತರ ಪ್ರದೇಶವೆಂದು ಶಿರೋಲಿ ಶಿಖರ ಹೆಸರಾಗಿದೆ. ಚಾರಣಿಗರಿಗೆ ಮನಮೆಚ್ಚುವ ತಾಣವಾಗಿದೆ. ಈ ಶಿಖರದಿಂದ ಕಣ್ಮನ ಸೆಳೆಯುವ ಸೂರ್ಯಾಸ್ತದ ದೃಶ್ಯ...
ದಿಗ್ಗಿ ನದಿಯಿಂದ ಹುಟ್ಟುವ ಕಾಳಿ ನದಿಯು ಸುಮಾರು 4 ಲಕ್ಷ ಜನರ ಜೀವನಾಡಿಯಾಗಿದೆ. ಹಲವಾರು ಅಣೆಕಟ್ಟುಗಳನ್ನು ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಗಣೇಶಗುಡಿ ಬಳಿ ಇರುವ ಸುಪಾ ಅಣೆಕಟ್ಟು ಕಾಳಿ ನದಿಗೆ ಕಟ್ಟಲಾಗಿರುವ ದೊಡ್ಡ ಅಣೆಕಟ್ಟು ಎನ್ನಲಾಗಿದೆ. ಸುಪಾ ಅಣೆಕಟ್ಟಿನಲ್ಲಿ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ.ಪ್ರವಾಸಿಗರು...