ಕನೌಜ್ ರಸ್ತೆ ಮೇಲೆ ನಿರ್ಮಿಸಲ್ಪಟ್ಟಿರುವ, ಬ್ರಹ್ಮಾವರ್ತ ಘಾಟ್ ಗಂಗಾ ನದಿಯ ದಡದ ಉದ್ದಕ್ಕೂ ಇದೆ. ಈ ನೆಮ್ಮದಿಯ ಸ್ಥಾನ ದೊಡ್ಡ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವ ಹೊಂದಿದೆ. ಹಿಂದೂ ಪುರಾಣದ ಪ್ರಕಾರ, ಬ್ರಹ್ಮದೇವ ಅವನ ವಾಸಸ್ಥಳವಾಗಿ ಬಿಥೂರ್ ಅನ್ನು ಆಯ್ಕೆ ಮಾಡಿದ, ಮತ್ತು ಇಲ್ಲಿಯೇ ಮೊದಲ ಮಾನವರನ್ನು ಸೃಷ್ಟಿಸಿದ ಎಂದು ಹೇಳಲಾಗುತ್ತದೆ. ಈ ಘಟನೆಯಿಂದಾಗಿ ಈ ಸ್ಥಳವು ಬ್ರಹ್ಮಾವರ್ತ ಅಥವಾ ಬ್ರಹ್ಮನ ಪೀಠ ಎಂದು ಚಿರಪರಿಚಿತವಾಯಿತು.
ನಂತರ ಬ್ರಹ್ಮದೇವ, ಈ ಘಾಟ್ ನಲ್ಲಿ ಬ್ರಹ್ಮೇಶ್ವರ ಮಹಾದೇವ ಎಂದು ಇಂದಿಗೂ ಪೂಜಿಸಲಾಗುವ ಶಿವಲಿಂಗವನ್ನು ಸ್ಥಾಪಿಸಿದ ಎಂದು ಹೇಳಲಾಗುತ್ತದೆ. ಇಲ್ಲಿರುವ ಕುದುರೆಯ ಉಗುರು ಭಕ್ತರ ನಡುವೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಉಗುರು ಬ್ರಹ್ಮನ ಕುದುರೆಯದ್ದು ಎಂದು ನಂಬಲಾಗಿದೆ.