ನಗರ ಎಂಬ ಪದವನ್ನು ಸಾಮಾನ್ಯವಾಗಿ ಯಾವುದೇ ವಸಾಹತು, ಉಪಜಿಲ್ಲೆಯ ಅಥವಾ ಸಿಟಿಗಳಿಗೆ ಬಳಸಲಾಗುತ್ತದೆ. ಆದಾಗ್ಯೂ, ಇದು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಒಂದು ಹಳ್ಳಿಯ ಹೆಸರು. ಈ ಸ್ಥಳವನ್ನು ನಗರ ಬಜಾರ್ ಎಂದು ಕರೆಯುತ್ತಾರೆ. ಜಿಲ್ಲೆಯ ಕಾರ್ಯಾಲಯದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ನೆಲೆಯಾಗಿರುವ ನಗರ, ಗಣೇಶ್ ಪುರದ ನಂತರ ಇಡೀ ಜಿಲ್ಲೆಯ ಎರಡನೇ ದೊಡ್ಡ ಪಂಚಾಯತ್ ಪ್ರದೇಶವಾಗಿದೆ.
ಅತ್ಯಂತ ಎತ್ತರದ ದಿಬ್ಬದ ಮೇಲೆ ಇರುವ ಹಳ್ಳಿ ಗೌತಮ ಬುದ್ಧನ ಜನ್ಮಸ್ಥಳ ಎಂದು ನಂಬಲಾಗಿದೆ. ಆದರೆ ಅದೇನೆ ಇರಲಿ, ಈ ದಿಣ್ಣೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸತ್ಯದ ಬಗ್ಗೆ ಪರಿಶೋಧನೆ ಮಾಡಬೇಕಾಗಿದೆ. ಇದು ಹದಿನಾಲ್ಕನೆಯ ಶತಮಾನದ ಗೌತಮ್ ಅರಸರುಗಳ ನಿವಾಸವಾಗಿತ್ತು ಎನ್ನಲು ಹಳೆಯ ಕೋಟೆಯ ಅವಶೇಷಗಳನ್ನು ಇಲ್ಲಿ ಕಾಣಬಹುದು. ಈ ಕೋಟೆಯ ಅವಶೇಷಗಳ ಮೇಲೆ ನಿರ್ಮಿಸಲಾಗಿರುವ ರಾಜ್ಕೋಟ್ ದೇವಾಲಯವಿದೆ. ಪ್ರಸಿದ್ಧ ಚಂದೂ ತಾಲ್ ಅಥವಾ ನೀರಿನ ನೆಲೆ ಪ್ರವಾಸಿಗರು, ಪಕ್ಷಿ ವೀಕ್ಷಕರಿಗೆ, ಮೀನುಗಾರರು ಮತ್ತು ವಿಹಾರಿಗಳಿಗೆ ಜನಪ್ರಿಯ ತಾಣವಾಗಿದೆ. ಇದು ಪಶ್ಚಿಮ ಭಾಗದಲ್ಲಿ ನೆಲೆಸಿದೆ.


Click it and Unblock the Notifications