1969 ರಲ್ಲಿ ಸ್ಥಾಪನೆಗೊಂಡ ಈ ಕ್ರಿಡಾಂಗಣವು ಬೆಂಗಳೂರಿನ ಹೃದಯಭಾಗದಲ್ಲಿದೆ. ಕ್ವೀನ್ಸ್ ರಸ್ತೆ, ಕಬ್ಬನ್ ಪಾರ್ಕ್ ಹತ್ತಿರವಿರುವ ಈ ಕ್ರಿಡಾಂಗಣವು ದೇಶದ ಜನಪ್ರಿಯ ಕ್ರಿಡಾಂಗಣಗಳಲ್ಲೊಂದಾಗಿದೆ. 1977-80 ರ ಅವಧಿಯಲ್ಲಿ ಬಿ.ಸಿ.ಸಿ.ಐ ನ ಅಧ್ಯಕ್ಷರಾಗಿದ್ದು, ನಾಲ್ಕು ದಶಕಗಳ ಕಾಲ ಕೆ.ಎಸ್.ಸಿ.ಎ ನಲ್ಲೂ ಕಾರ್ಯನಿರ್ವಹಿಸಿದ ಎಮ.ಚಿನ್ನಸ್ವಾಮಿಯವರ ಜ್ನ್ಯಾಪಕಾರ್ಥವಾಗಿ ಈ ಹೆಸರನ್ನಿಡಲಾಗಿದೆ. ಮೊಟ್ಟಮೊದಲಿನ ಕ್ರಿಕೇಟ್ ಪಂದ್ಯಾವಳಿ(ಟೆಸ್ಟ್)ಯು ಇಲ್ಲಿ 1974 ರಲ್ಲಿ ಜರುಗಿದ್ದು ಭಾರತ ಹಾಗು ವೆಸ್ಟ್ ಇಂಡೀಸ್ ನ ನಡುವಿನದಾಗಿತ್ತು. ಇದು ಕರ್ನಾಟಕ ರಾಜ್ಯ ರಣಜಿ ತಂಡ ಮತ್ತು ಐ.ಪಿ.ಎಲ್ ನ ಒಂದು ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇವರ ಮನೆ ಕ್ರಿಡಾಂಗಣವಾಗಿದೆ.55000 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಈ ಕ್ರಿಡಾಂಗಣದಲ್ಲಿ, ಭಾರತವು ಆತೀಥ್ಯ ವಹಿಸಿದ 1987,1996 ಹಾಗು ಇತ್ತೀಚಿಗಿನ 2011 ರ ವರ್ಡ್ ಕಪ್ ನ ಅನೇಕ ಪಂದ್ಯಾವಳಿಗಳು ಜರುಗಿವೆ. ಕ್ರಿಕೇಟ್ ಇತಿಹಾಸದ ಅನೇಕ ಅದ್ಭುತಗಳಿಗೆ ಇದು ಸಾಕ್ಷಿಯಾಗಿದೆ. ಇದನ್ನು ನವೀಕರಿಸುವ ಯೋಚನೆಯೂ ಇದೆ. ಕೆ.ಎಸ್.ಎ.ಸಿ ಯು ಕೂಡುವ ಸಾಮರ್ಥ್ಯವನ್ನು 70,000 ಕ್ಕೆ ಏರಿಸುವ ಯೋಚನೆಯಲ್ಲಿದೆ. ಯು.ಬಿ ಗ್ರೂಪನ ಮುಖ್ಯಸ್ಥರಾದ ವಿಜಯ ಮಲ್ಲ್ಯರ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮನೆ ಕ್ರಿಡಾಂಗಣವಾಗಿದ್ದರಿಂದ ಇದಕ್ಕೆ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ.