ಅನನ್ಯವಾದ ಪರಿಕಲ್ಪನೆಯನ್ನು ಹೊಂದಿದ ಒಂದು ರೀತಿಯ ಜನಾಕರ್ಷಣೆಯ ಉದ್ಯಾನವನವಿದು. ಈ ಜಲಾನಯನ, ನೈಸರ್ಗಿಕ ಹಿತಾಸಕ್ತಿಯ ಬೋಟಿಂಗ್ ಉದ್ಯಾನವನವು ಬೆಂಗಳೂರಿನ ಕೆಂಪಾಪುರದ ಬಳಿಯಿರುವ ಹೆಬ್ಬಾಳನ ಹೊರ ವರ್ತುಲ ರಸ್ತೆಯಲ್ಲಿದೆ. ನಾಗಾವರ ಸರೋವರದ ದಡದಲ್ಲಿರುವ ಇದು 1.5ಕಿ.ಮೀ ವರೆಗೂ ಹರಡಿದೆ. ಬುದ್ಧನ ಜನ್ಮಸ್ಥಳದ ಹೆಸರನ್ನು ಇದಕ್ಕೆ ಇಡಲಾಗಿದ್ದು, ಬುದ್ಧನ 25 ಅಡಿಯ ವಿಗ್ರಹವನ್ನು ಇಲ್ಲಿ ಕಾಣಬಹುದು. ಇದೊಂದು ಕುಟುಂಬ ಮನರಂಜನೆಗೆ ಹೇಳಿ ಮಾಡಿಸಿದ ಸ್ಥಳ. ಸರೋವರದ ಮುಂಭಾಗದಲ್ಲಿ ನಿಂತಾಗ ಕಾಣುವ ದೃಶ್ಯವು ತುಂಬಾ ಸೊಗಸಾಗಿರುತ್ತದೆ. ಇದೊಂದು ಮನರಂಜನೆ ಉದ್ಯಾನವನವಾಗಿದ್ದು ಅನೇಕ ಕುಟುಂಬಗಳು ಇಷ್ಟ ಪಡುತ್ತವೆ.ದೋಣಿ ವಿಹಾರವು ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದ್ದು ಇತರೆ ಮನರಂಜನೆಗಳಾದ, ಬೌನ್ಸಿ ಟ್ರೇನ್, ಆಟದ ಮೈದಾನ, ಭಂಗಿ ನಗೆತ, ಸ್ಪಾನಿಶ್ ಹೋರಿ ಸವಾರಿ ಮಕ್ಕಳಿಗಾಗಿವೆ. ಒಂದು ರೀತಿಯ ಆಕರ್ಷಣೆಯಾದ ಬೀಚ್ ಬೆಂಗಳೂರಿನಲ್ಲಿ ಇಲ್ಲವಾಗಿದ್ದು ಅದರ ಕಮ್ಮಿಯನ್ನು ಸರಿದೂಗಿಸಲು ಈ ಉದ್ಯಾನವನದಲ್ಲಿ ಕೃತಕವಾಗಿ ನಿರ್ಮಿಸಲಾದ ಸಮುದ್ರದ ಅಲೆಗಳಿವೆ. ಹೀಗೆ ಸುತ್ತಾಡುತ್ತ ಸರೋವರ ಹಾಗು ಅದರ ಸುತ್ತಲಿನ ಹಸಿರು ಪರಿಸರದ ವಿಹಂಗಮ ನೋಟವನ್ನು ಸವಿಯಬಹುದು. ಅನೇಕ ಉಪಹಾರಗೃಹಗಳಿದ್ದು ನ್ಯಾಯವಾದ ಬೆಲೆಯಲ್ಲಿ ತಿಂಡಿ ತಿನಿಸುಗಳನ್ನು ತಿನ್ನಬಹುದು. ಕುಟುಂಬ ಸಮೇತ ಮನರಂಜನೆಯಿಂದ ಹಿಡಿದು ಸಾಹಸ ಹಾಗು ಆರಾಮದಾಯಕ ಅನುಭವಗಳಿಗೆ ಈ ಉದ್ಯಾನವನ ಒಂದು ಉತ್ತಮ ಉದಾಹರಣೆಯಾಗಿದೆ.