ಅಮೃತಸರದ ಹಾಲ್ ಬಜಾರ್ ನಲ್ಲಿ ಗಾಂಧಿ ಗೇಟ್ ಬಳಿ ಖೈರ್-ಉದ್-ದಿನ್ ಮಸೀದಿಯಿದೆ. ಈ ಆರಾಧನಾ ಗೃಹ ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಇದನ್ನು 1876ರಲ್ಲಿ ಮಹಮದ್ ಖೈರುದ್ದಿನ್ ಕಟ್ಟಿಸಿದ. ಬ್ರಿಟಿಷರ ವಿರುದ್ಧ ಟೂಟಿ-ಈ-ಹಿಂದ್ ಶಾಹ್ ಅತುಲ್ಲಾಹ್ ಯುದ್ಧ ಘೋಷಿಸಿದ್ದು ಇದೇ ಭವ್ಯವಾದ ಐತಿಹಾಸಿಕ ಕಟ್ಟಡದಲ್ಲಿ.
ಸರಿಸಾಟಿ ಇಲ್ಲದ ಮನಸೂರೆಗೊಳ್ಳುವಂತಹ ವಿನ್ಯಾಸವನ್ನು ಹೊಂದಿರುವ ಖೈರ್-ಉದ್-ದಿನ್ ಮಸೀದಿ ಅಮೃತಸರದಲ್ಲಿರುವ ಅನೇಕ ಪವಿತ್ರ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ನಮಾಜ್ ಮಾಡುವ ಸಮಯದಲ್ಲಿ ಮಸೀದಿ ಮುಂದಿರುವ ದೊಡ್ಡ ಆವರಣದಲ್ಲಿ ನೂರಾರು ಮಂದಿ ಗಂಡಸರು ಅಲ್ಲಾಹುವಿಗೆ ಪ್ರಾರ್ಥನೆಯನ್ನು ಸಲ್ಲಿಸಲು ಸೇರುತ್ತಾರೆ. ಆಯಕಟ್ಟಿನ ಸ್ಥಾನದಲ್ಲಿರುವ ಈ ಮಸೀದಿಗೆ ಪ್ರವಾಸಿಗರು ಭೇಟಿ ನೀಡುವುದು ಸೂಕ್ತ.