ಬೃಹತ್ತಾದ ಹರಮಂದಿರ ಸಾಹೀಬ್ ಬಳಿಯ ಗುರುದ್ವಾರಾ ಗುರು ಕಾ ಮಹಲ್ ಉಪಸ್ಥಿತವಿದೆ. ಅಮೃಸರದ ಸಂಸ್ಥಾಪಕರಾದ ಗುರು ರಾಮದಾಸಜಿಯವರು 1573ರಲ್ಲಿ ಇದನ್ನು ಅವರ ವಾಸಕ್ಕಾಗಿ ಕಟ್ಟಿಸಿದ್ದರು. ಅವರ ಮಗನಾದ ಗುರು ಅರ್ಜುನ್ ದೇವಜಿ ಮದುವೆಯಾಗಿ 5ನೇ ಸಿಖ್ ಗುರುವಾಗಿ ಆಶೀರ್ವಾದವನ್ನು ಇದೇ ನಿವಾಸದಲ್ಲಿ ತೆಗೆದುಕೊಂಡರು.
ಕಾಲ ಕಳೆದ ಹಾಗೆ ಗುರುದ್ವಾರಾ ಗುರು ಕಾ ಮಹಲ್ ಗುರು ಅರ್ಜುನ್ ದೇವಜಿ ಅವರ ಮಗನಾದ ಹರಗೋಬಿಂದ್ ಜಿಯವರ ನಿವಾಸ ಸ್ಥಾನವಾಯಿತು. ಅವರ ಮದುವೆಯೂ ಇದೇ ನಿವಾಸದಲ್ಲಿ ನೆರವೇರಿತು. ಹೀಗೆ ಮದುವೆಯಾದ ಗುರು ಗೋಬಿಂದ್ ಜಿಯವರ ಪುತ್ರನಾದ ಬಾಬಾ ಅಟಲ್ ರಾಯ್ ಮತ್ತು ಗುರು ತೇಘ್ ಬಹದ್ದೂರ್ ಜೀಯವರ ಜನನ ಕೂಡ ಇಲ್ಲೇ ಆಯಿತು.
ನಂತರ ಗುರು ಹರಗೋಬಿಂದ್ ಜಿ ಮತ್ತು ಅವರ ತಂದೆಯಾದ ಗುರು ಅರ್ಜುನ್ ದೇವಜಿ ತಮ್ಮ ನಿವಾಸವನ್ನು ಮಂದಿರವಾಗಿ ಪರಿವರ್ತಿಸಿದರು. ಪವಿತ್ರ ಗುರು ಗ್ರಂಥ ಸಾಹೀಬನ್ನು ಗುರುದ್ವಾರಾದೊಳಗಿನ ದೊಡ್ಡ ಚತುಷ್ಕೋನಾಕಾರದ ದೊಡ್ಡ ಕೋಣೆಯಲ್ಲಿ ಇರಿಸಲಾಗಿದೆ. ಈ ಧಾರ್ಮಿಕ ಸ್ಥಳಕ್ಕೆ ಗುರು ತೇಘ ಬಹದ್ದೂರ್ ಜಯಂತಿ ದಿವಸ ಭೇಟಿ ನೀಡಬಹುದು.