1992 ರಲ್ಲಿ ನಿಧನಹೊಂದಿದ ಶ್ರೀ ಆನಂದ್ ಮಹಾರಾಜರ ಪ್ರೀತಿಯ ನೆನಪಿಗಾಗಿ ಆನಂದ್ ಧಾಮವನ್ನು ನಿರ್ಮಿಸಲಾಯಿತು. ಅವರು ಶಿರಲ್ ಚಿಚೊಂಡಿ ಎಂಬ ಸ್ಥಳದಲ್ಲಿ ಹುಟ್ಟಿದರು ತಮ್ಮ ಹದಿಮೂರನೇ ವಯಸ್ಸಿನಲ್ಲಿ ಶ್ರೀ ರತನ್ ಋಷಿಜಿ ಮಹಾರಾಜರ ಬೋಧನೆಗಳಿಂದ ಪ್ರಭಾವಿತರಾಗಿ ಆಧ್ಯಾತ್ಮಿಕ ಜ್ಞಾನವನ್ನು ಸ್ವಾಧೀನ ಪಡಿಸಿಕೊಂಡಿದ್ದರು.
ಶ್ರೀ ಆನಂದ್ ಮಹಾರಾಜರು ಸಮಾಜದ ಔನತ್ಯಕ್ಕಾಗಿ ಅಹ್ಮದ್ ನಗರದಲ್ಲಿ ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿದರು. ಪ್ರೇಮ, ಸಹಿಷ್ಣುತೆ ಮತ್ತು ಸದಾಚಾರದ ಮಾರ್ಗವನ್ನು ಅನುಸರಿಸುತ್ತಿದ್ದು, ನೊಂದವರಿಗೆ ಮತ್ತು ಪೀಡಿತರಿಗೆ ನೆರವಾಗುತ್ತಿದ್ದರು.
ಅವರು ಉತ್ತಮ ಬರಹಗಾರರಾಗಿದ್ದು ಅನೇಕ ಮರಾಠಿ ಮತ್ತು ಹಿಂದಿ ನಿಯತಕಾಲಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.