ಅಹ್ಮದ್ನಗರ ಕೋಟೆ ಅಹ್ಮದ್ನಗರದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ನಗರದ ಸಂಸ್ಥಾಪಕನಾದ ಅಹ್ಮದ್ ನಿಜಾಮ್ ಷಾ, 15 ಮತ್ತು 16 ನೇ ಶತಮಾನದಲ್ಲಿ ಈ ಅಹ್ಮದ್ನಗರ ಕೋಟೆಯನ್ನು ನಿರ್ಮಿಸಿದನು.
ಕೋಟೆಯಲ್ಲಿ 18 ಮೀಟರ್ ಎತ್ತರದ ಗೋಡೆಗಳಿದ್ದು ಅವು 22 ಕೊತ್ತಲಗಳಿಂದ ಬೆಂಬಲಿತವಾಗಿದೆ. ಇದು 30 ಮೀಟರ್ ಅಗಲದ 24 ದುರ್ಗಗಳನ್ನು ಹೊಂದಿದೆ. ಇದು ವಶಪಡಿಸಿಕೊಂಡ ಶತ್ರು ಸೈನಿಕರಿಗೆ ಕಲ್ಪಿಸಿಕೊಡುವ ಜೈಲಾಗಿ ಕಾರ್ಯನಿರ್ವಹಿಸುತ್ತಿತ್ತು. ಅದು ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹಲವಾರು ನಾಯಕರನ್ನು ಬಂಧಿಸಿಡಲು ಬಳಸಲಾಯಿತು. ಡಿಸ್ಕವರಿ ಆಫ್ ಇಂಡಿಯಾ - - ಜವಾಹರಲಾಲ್ ನೆಹರೂ ರಚಿಸಿದ ಪ್ರಸಿದ್ಧ ಪುಸ್ತಕವನ್ನು ಇಲ್ಲೇ ಬರೆದಿದ್ದಾರೆ.
ಅಹ್ಮದ್ನಗರ ಕೋಟೆಯು 1559 ರಿಂದ 1562 ರ ಅವಧಿಯಲ್ಲಿ ನಿಜಾಮಿ ರಾಜನ ಆಳ್ವಿಕೆಯ ಅಡಿಯಲ್ಲಿ ಸಾಕಷ್ಟು ನವೀಕರಣಗೊಂಡಿತು. ಇದು ಪ್ರಸ್ತುತ ಭಾರತದ ಸೈನ್ಯ ನಿರ್ವಹಣೆಯನ್ನು ಹೊಂದಿದೆ.