ಆಗ್ರಾ ನಗರವು ಮಂಗಳೇಶ್ವರ್ ದೇವಾಲಯ, ಶ್ರೀ ಕೃಷ್ಣ ಪ್ರಣಮಿ ದೇವಾಲಯ, ಆರ್ಯ ಸಮಾಜ್ ದೇವಾಲಯಗಳು ಸೇರಿದಂತೆ ಹಲವಾರು ದೊಡ್ಡ ದೇವಾಲಯಗಳನ್ನು ಹೊಂದಿದೆ.ದಯಾಳ್ ಬಾಗ್ನಲ್ಲಿರುವ ಸ್ವಾಮೀಜಿ ಮಹಾರಾಜ್ ದೇವಾಲಯವು ಇವುಗಳಲ್ಲಿ ಅತಿ ಹೆಚ್ಚು ಪ್ರಖ್ಯಾತಿಯನ್ನು ಸಂಪಾದಿಸಿರುವ ದೇವಾಲಯವಾಗಿದೆ.ಈ ದೇವಾಲಯಗಳಲ್ಲಿ ಕೆಲವು ದೇವಾಲಯಗಳು ಶಿವನಿಗೆ ಸಮರ್ಪಿಸಲ್ಪಟ್ಟಿವೆ. ಬಾಗೇಶ್ವರ್ ನಾಥ್ ದೇವಾಲಯವು ರಾಜಾ ಕಿ ಮುಂಡಿಗೆ ಸಮೀಪದಲ್ಲಿರುವ ಆಡಂಬರಕ್ಕೆ ಹೆಸರಾಗಿರುವ ಪ್ರದೇಶದಲ್ಲಿ ನೆಲೆಗೊಂಡಿದೆ.
ರಾಮ್ರಟ್ಟನ್ ರಸ್ತೆಯ ನಡುವೆ ಸೆಂಟ್. ಜಾನ್ಸ್ ಕಾಲೇಜ್ ಮತ್ತು ಸೇಲ್ಸ್ ಟ್ಯಾಕ್ಸ್ ಕಛೇರಿಗೆ ಪಕ್ಕದಲ್ಲಿರುವ ಈ ದೇವಾಲಯವು ನಗರದ ಕೇಂದ್ರ ಭಾಗದಿಂದ ಎರಡು ಕಿ.ಮೀ ದೂರದಲ್ಲಿದೆ. ಬಸ್ಸುಗಳ ಮೂಲಕ ಈ ದೇವಾಲಯಕ್ಕೆ ಸುಲಭವಾಗಿ ತಲುಪಬಹುದು. ಮನಮೋಹಕವಾದ ದೇವಾಲಯದ ಕಟ್ಟಡದಲ್ಲಿ ಹತ್ತಕ್ಕು ಹೆಚ್ಚು ಶಿವಲಿಂಗಗಳು ಇವೆ. ಈ ದೇವಾಲಯವ್ ಭಕ್ತಾಧಿಗಳ ವಲಯದಲ್ಲಿ ಭಾರೀ ಪ್ರಸಿದ್ಧಿಯನ್ನು ಸಂಪಾದಿಸಿದ್ದು, ಇಲ್ಲಿಗೆ ದೇಶದ ನಾನಾ ಮೂಲೆಗಳಿಂದ ಮತ್ತು ವಿದೇಶಗಳಿಂದ ಸಹ ಪ್ರವಾಸಿಗರು ಬರುತ್ತಿರುತ್ತಾರೆ.
ಹಬ್ಬದ ಸಂದರ್ಭಗಳಲ್ಲಿ ಈ ದೇವಾಲಯವನ್ನು ದೀಪಗಳಿಂದ ಅಲಂಕರಿಸಿರುತ್ತಾರೆ. ಆಗ ಇಲ್ಲಿಗೆ ಜನಸಾಗರವೇ ಹರಿದು ಬರುತ್ತದೆ.


Click it and Unblock the Notifications