ಹಜರತ್ ಬಾಲ್ ಮಸೀದಿ ವಿಜಯವಾಡ ನಗರದ ಮುಸ್ಲಿಂ ಭಕ್ತಾದಿಗಳ ನಡುವೆ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದೆ. ಈ ಮಸೀದಿಯು ಅದರ ವಾಸ್ತುಶಿಲ್ಪದ ಸೌಂದರ್ಯದಿಂದಾಗಿ ಹೆಚ್ಚು ಪ್ರಸಿದ್ಧಿಯನ್ನು ಗಳಿಸಿದೆ. ಈ ಮಸೀದಿಯು ಮುಸ್ಲಿಂ ಪವಿತ್ರ ಗುರು ಮೊಹಮ್ಮದ್ ನ ಸ್ಮಾರಕವನ್ನು ಹೊಂದಿದೆ ಎನ್ನಲಾಗುತ್ತದೆ. ಆದ್ದರಿಂದ ದೇಶಾದ್ಯಂತ ಭಕ್ತಾದಿಗಳು ತಮ್ಮ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಆಗಮಿಸುತ್ತಾರೆ.