ವೇಣೂರಿನ ಮತ್ತೊಂದು ಜನಪ್ರಿಯ ಸ್ಥಳವಾದ ಕಲ್ಲು ಬಸದಿಯನ್ನು ದೊಡ್ಡ ಬಸದಿ ಎಂದೂ ಕರೆಯಲಾಗುತ್ತದೆ. ಕಲ್ಲುಗಳಿಂದ ನಿರ್ಮಾಣವಾಗಿರುವುದರಿಂದ ಇದನ್ನು ಕಲ್ಲು ಬಸದಿ ಎಂದು ಕರೆಯಲಾಗುತ್ತದೆ. ಈ ಬಸದಿಯು ಬೃಹತ್ತಾದ ಆವರಣ ಹೊಂದಿರುವುದರಿಂದ ದೊಡ್ಡ ಬಸದಿ ಎಂಬ ಹೆಸರನ್ನೂ ಪಡೆದಿದೆ. 5 ಅಡಿ ಎತ್ತರವಿರುವ ಶಾಂತಿನಾಥರ ವಿಗ್ರಹವನ್ನು ಇಲ್ಲಿ ಕಾಣಬಹುದಾಗಿದ್ದು ಅದರ ಎರಡೂ ಬದಿಗಳಲ್ಲಿ ಯಕ್ಷಿ ಮಹಾಮಾನಸಿ ಮತ್ತು ಯಶ ಗರುಡರ ಕಲ್ಲಿನ ರಚನೆಯನ್ನು ಪ್ರವಾಸಿಗರು ಗಮನಿಸಬಹುದು. ಈ ಬಸದಿಯಲ್ಲಿ ಪದ್ಮಾಸನದಲ್ಲಿ ಧ್ಯಾನಕ್ಕೆ ಕುಳಿತಿರುವ ತೀರ್ಥಂಕರರ ವಿಗ್ರಹವು ಸೊಗಸಾಗಿದ್ದು ಪ್ರಮುಖ ಆಕರ್ಷಣೆಯಾಗಿದೆ.ಚಂದ್ರನಾಥ ಮತ್ತು ಮಹಾವೀರ ತೀರ್ಥಂಕರರ ವಿಗ್ರಹಗಳನ್ನು ಕೂಡ ಕಲ್ಲು ಬಸದಿಯಲ್ಲಿ ನೋಡಬಹುದು. ಅತಿ ಸೂಕ್ಷ್ಮವಾಗಿ ಗಮನಿಸಿದಾಗ 24 ತೀರ್ಥಂಕರರ ಕಂಚಿನ ವಿಗ್ರಹಗಳ ಕೆಳ ಭಾಗದಲ್ಲಿ ಉಲ್ಲೇಖವೊಂದನ್ನು ಕಾಣಬಹುದಾಗಿದೆ. ಇದನ್ನು 'ಹರಿ ಪೀಠ' ಎಂದು ವ್ಯಾಖ್ಯಾನಿಸಲಾಗಿದೆ. ಕಲ್ಲು ಬಸದಿಯ ಪ್ರವೇಶ ಜಾಗವು (ಹೊರಭಾಗ ಮಾತ್ರ) ಪದರು ಕಲ್ಲಿನಿಂದ ನಿರ್ಮಾಣಗೊಂಡಿದೆ. ಬಸದಿಯ ಪವಿತ್ರವಾದ ಗರ್ಭ ಸ್ಥಳದಲ್ಲಿ ಎಡ ಬದಿಗೆ ಪದ್ಮಾವತಿ ದೇವಿ ಹಾಗು ಬಲ ಬದಿಗೆ ಸರಸ್ವತಿ ದೇವಿಯ ವಿಗ್ರಹಗಳನ್ನು ಕಾಣಬಹುದು. ಈ ಎರಡು ವಿಗ್ರಹಗಳ ಉಪಸ್ಥಿತಿಯಿಂದ ಇದನ್ನು 'ಅಮ್ಮನವರ ಬಸದಿ'ಎಂದು ಕರೆಯಲಾಗುತ್ತದೆ.


Click it and Unblock the Notifications