ಬಿನ್ನಣಿ ಬಸದಿಯು ನೋಡಬಹುದಾದ ಮತ್ತೊಂದು ಸ್ಥಳವಾಗಿದೆ. 16ನೇ ಶತಮಾನದ ತೀರ್ಥಂಕರರಾದ ಶಾಂತಿನಾಥರ ಕಂಚಿನ ವಿಗ್ರಹದಿಂದ ಈ ಬಸದಿಯು ಹೆಸರುವಾಸಿಯಾಗಿದೆ. ಬಲ ಬಸದಿ ಎಂದೂ ಕರೆಯಲ್ಪಡುವ ಈ ಬಸದಿಯು ಅಕ್ಕಂಗಳ ಬಸದಿಯ ಎದುರಿನಲ್ಲೆ ಇದ್ದು ಬಿನ್ನಣಿ ದೇವಿ (ತಿಮ್ಮರಾಜನ ಕಿರಿಯ ರಾಣಿ) ಅವರಿಂದ ನಿರ್ಮಿತವಾಗಿದೆ. ಈ ಬಸದಿಯ ಒಳಗೆ ಪ್ರವೇಶಿಸಿದಾಗ ಚಾರುಕೀರ್ಥಿ ಸ್ವಾಮಿಯ ಆಶೀರ್ವಾದಗಳು ಹಾಗು ಬಸದಿಗೆ ನೀಡಲಾದ ದಾನಗಳ ಕುರಿತು ವಿವರಣೆಯುಳ್ಳ ಉಲ್ಲೇಖಗಳಿರುವುದನ್ನು ಕಾಣಬಹುದು. ಈ ಬಸದಿಯ ದಕ್ಷಿಣ ಭಾಗದಲ್ಲಿ ಬ್ರಹ್ಮ ದೇವರ ಸ್ಥಂಬವಿರುವುದನ್ನು ಪ್ರವಾಸಿಗರು ಗಮನಿಸಬಹುದು.