ರಾಣಾ ಮಹಲ್ ಘಾಟ್ ಹೆಸರೇ ಸೂಚಿಸುವಂತೆ ರಾಜಪುತ ವಂಶಸ್ಥ ಉದಯಪುರದ ಮಹಾರಾಣ 1670ರಲ್ಲಿ ನಿರ್ಮಿಸಿದ್ದ. ಇದು ದರ್ಭಂಗ್ ಘಾಟ್ ಮತ್ತು ಚೌಸೈತಿ ಘಾಟ್ ಮಧ್ಯೆ ಮತ್ತು ದಶಅಶ್ವಮೇಧದ ಘಾಟ್ ನ ದಕ್ಷಿಣದಲ್ಲಿದೆ. ಈ ಘಾಟ್ ನಲ್ಲಿ ಭವ್ಯವಾದ ಅರಮನೆಯಿದ್ದು, ಇದು ರಾಜಪುತ ವಾಸ್ತುಶಿಲ್ಪ ಕಲೆಗೆ ಸಾಕ್ಷಿ. ಇದನ್ನು ಉದಯಪುರದ ರಾಣಾ ಜಗತ್ ಸಿಂಗ್ ನವೀಕರಿಸಿದ್ದ.
ಅರಮನೆಯ ಕಂದುಬಣ್ಣದ ರಚನೆಯ ತಪ್ಪಲಿನಲ್ಲಿ ಈ ಘಾಟ್ ಇದೆ. ಘಾಟ್ ನ ತುದಿಯಲ್ಲಿ ನಿರ್ಮಿಸಲಾಗಿರುವ ಭವ್ಯ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆ. 2008-2009ರಲ್ಲಿ ಪ್ರಾದೇಶಿಕ ಪ್ರವಾಸೋದ್ಯಮ ಇಲಾಖೆಯ ನವೀಕರಣ ಮತ್ತು ಮರುನಿರ್ಮಾಣ ಕಾರ್ಯವಾದ ವಾರಣಾಸಿ ಪುನರುಜ್ಜೀವನ ಯೋಜನೆಯಲ್ಲಿ ಈ ಘಾಟ್ ನ್ನು ಸೇರಿಸಲಾಗಿತ್ತು. ಮಕ್ಕಳು ಮತ್ತು ವಯಸ್ಕರು ಬೇಸಿಗೆಯಲ್ಲಿ ಇಲ್ಲಿಗೆ ಬಂದು ಈಜು ಕಲಿಯುತ್ತಾರೆ. ರಾತ್ರಿ ವೇಳೆ ಈ ಘಾಟ್ ನಲ್ಲಿ ಪಿಶಾಚಿಗಳು ತಿರುಗಾಡುತ್ತವೆ ಎಂಬ ಕಥೆಯಿದೆ.