ಮಹಿಷಾಸುರ ಮರ್ದಿನಿ ದೇಗುಲವು ಕಡಿಯಾಲಿಯಲ್ಲಿದ್ದು, ಉಡುಪಿಯಿಂದ ಸುಮಾರು ೨ ಮೈಲು ಪಶ್ಚಿಮಕ್ಕಿದೆ. ದಕ್ಷಿಣ ಭಾರತದಲ್ಲೇ ಅತಿ ಹಳೆಯ ದೇಗುಲ ಎಂಬ ಇತಿಹಾಸ ಇದಕ್ಕಿದೆ. ೧೨೦೦ ವರ್ಷಗಳಿಗಿಂತಲೂ ಹೆಚ್ಚು ಇತಿಹಾಸ ಈ ದೇಗುಲಕ್ಕಿದೆ.ಕಡಿಯಾಲಿ ಮಹಿಷಾಸುರಮರ್ದಿನಿ ದೇಗುಲವು ಉಡುಪಿಯ ಶ್ರೀ ಕೃಷ್ಣ ದೇಗುಲದ ಸಮೀಪದಲ್ಲಿದ್ದು, ಮಣಿಪಾಲ ವಿಶ್ವವಿದ್ಯಾಲಯಕ್ಕೆ ಕೂಡಾ ಹತ್ತಿರದಲ್ಲಿದೆ. ಇದು ಚಾಲುಕ್ಯರ ಕಾಲದ ದೇಗುಲ. ಇತ್ತೀಚೆಗೆ ಈ ದೇಗುಲವನ್ನು ಜೀಣೋದ್ಧಾರ ಮಾಡಲಾಗಿದೆ.ಮಹಿಷಾಸುರಮರ್ದಿನಿಯ ಮೂರ್ತಿಯು ನಿಂತಿರುವ ಸ್ಥಿತಿಯಲ್ಲಿದೆ. ದೇಗುಲವನ್ನು ಕಲ್ಲಿನಿಂದ ಮಾಡಲ್ಪಟ್ಟಿದ್ದು, ಛಾವಣಿಯನ್ನು ಕೂಡಾ ಕಲ್ಲಿನ ಅಚ್ಚುಗಳಿಂದ ಮಾಡಲಾಗಿದೆ. ದೇಗುಲದ ಕೆಲವು ಆಕರ್ಷಣೆಗಳಲ್ಲಿ, ತೇರು ಕೂಡಾ ಒಂದು. ದುರ್ಗಾ ಮಾತೆಯ ಎದುರು ಈ ಹಬ್ಬವು ಪ್ರತಿ ವರ್ಷ ನಡೆಯುತ್ತದೆ. ಇನ್ನೊಂದು ಪುರಾತನ ದೇಗುಲ, ಅನಂತೇಶ್ವರ ದೇಗುಲವೂ ಕೂಡಾ ಇದರ ಸಮೀಪದಲ್ಲೇ ಇದೆ.ಬಸ್, ಟ್ಯಾಕ್ಸಿ ಹಾಗೂ ಅಟೊರಿಕ್ಷಾಗಳು ಉಡುಪಿ ಮತ್ತು ಕಡಿಯಾಲಿಯಿಂದ ಲಭ್ಯವಿರುತ್ತದೆ.