ಚಂದ್ರಮೌಳೀಶ್ವರ ದೇಗುಲವು ಉಡುಪಿ ಪಟ್ಟಣದಲ್ಲಿರುವ ಒಂದು ಪುರಾತನ ದೇವಸ್ಥಾನ. ಇದರ ಇತಿಹಾಸದಿಂದಾಗಿ ದೇವಸ್ಥಾನವನ್ನು ಉಡುಪಿ ಆಜ್ಯ ಎಂದು ಕರೆಯಲಾಗುತ್ತದೆ. ಒಂದು ನಂಬಿಕೆಯೆಂದರೆ, ಕೃಷ್ಣ ದೇವಸ್ಥಾನಕ್ಕೆ ಹೋಗುವ ಮುನ್ನ ಈ ದೇಗುಲಕ್ಕೆ ಹೋಗಬೇಕು ಎಂಬ ನಂಬಿಕೆ ಇದೆ. ಚಾಲುಕ್ಯರ ವಾಸ್ತುಶಿಲ್ಪಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಈ ದೇಗುಲದ ರಚನೆಯು ನಮ್ಮನ್ನು ಸುಮಾರು 7ನೇ ಅಥವಾ ಎಂಟನೇ ಶತಮಾನಕ್ಕೆ ಕೊಂಡೊಯ್ಯುತ್ತದೆ. ಅನಂತೇಶ್ವರ ದೇವಸ್ಥಾನ ನಿರ್ಮಾಣಗೊಂಡ ಸಂದರ್ಭದಲ್ಲೇ ಈ ದೇವಸ್ಥಾನ ಕೂಡಾ ನಿರ್ಮಾಣಗೊಂಡಿದೆ ಎಂದು ನಂಬಲಾಗಿದೆ.
ಚಂದ್ರಮೌಳೀಶ್ವರ ದೇಗುಲ ನಿರ್ಮಾಣಗೊಂಡ ಬಗ್ಗೆ ಇರುವ ದಂತಕಥೆ ತುಂಬಾ ಆಸಕ್ತಿದಾಯಕವಾಗಿದೆ. ಚಂದ್ರನು ಒಮ್ಮೆ ದಕ್ಷ ಪ್ರಜಾಪತಿಯ ಬಗ್ಗೆ ಅಸೂಯೆಯನ್ನು ಹೊಂದುತ್ತಾನೆ. ಚಂದ್ರನು ಶಿವನನ್ನು ಮೆಚ್ಚಿಸಲು ತಪಸ್ಸು ಮಾಡುತ್ತಾನೆ. ಅಲ್ಲಿಂದ ಈ ಪ್ರದೇಶವನ್ನು ಚಂದ್ರಮೌಳೀಶ್ವರ ಎಂದು ಕರೆಯಲಾಗುತ್ತಿದೆ.ಈ ದೇವಸ್ಥಾನಕ್ಕೆ ಮಣಿಪಾಲದಿಂದ ಸುಮಾರು ಮೂರು ಕಿ.ಮೀ ದೂರವಿದ್ದು, ಮಲ್ಪೆಯಿಂದ 9 ಕಿ.ಮೀ ಹಾಗೂ ಮಂಗಳೂರಿನಿಂದ ಸುಮಾರು 60 ಕಿ.ಮೀ ದೂರ, ಇನ್ನು ಕುಂದಾಪುರದಿಂದ 30 ಕಿ.ಮೀ ದೂರದಲ್ಲಿದೆ. ಸಮೀಪದ ವಿಮಾನ ನಿಲ್ದಾಣ ಮತ್ತು ರೈಲ್ವೇ ಸ್ಟೇಷನ್ ಇರುವುದು ಮಂಗಳೂರಿನಲ್ಲಿ.