ನೊಬೆಲ್ ಪ್ರಶಸ್ತಿ ವಿಜೇತ ಟಾಗೋರರು ತಮ್ಮ ಕಾದಂಬರಿಯಾದ 'ರಾಜರ್ಷಿ' ಮತ್ತು ನಾಟಕ 'ಬಿಶರ್ಜನ್' ನ ಮೂಲಕ ಭುವನೇಶ್ವರಿ ದೇವಸ್ಥಾನವನ್ನು ಚಿರಸ್ಮರಣೀಯವಾಗಿಸಿದ್ದರು. ಈ ದೇವಸ್ಥಾನ ಗೋಮತಿ ನದಿಯ ತೀರದಲ್ಲಿದೆ ಹಾಗೂ ಹಿಂದಿನ ಅರಮನೆಯ ಹತ್ತಿರದಲ್ಲಿದೆ.
ಭುವನೇಶ್ವರಿ ದೇವಿಯ ದೇವಸ್ಥಾನವಾದ ಭುವನೇಶ್ವರಿ ದೇವಸ್ಥಾನವನ್ನು 17 ನೆ ಶತಮಾನದಲ್ಲಿ ಮಹಾರಾಜ ಗೋವಿಂದ ಮಾಣಿಕ್ಯ ಅವರು ನಿರ್ಮಿಸಿದರು. ಇದನ್ನು ಕ್ರಿ.ಶ 1660 ರಿಂದ 1675 ರಮಧ್ಯದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗುತ್ತದೆ. ರಾಜಧಾನಿಯನ್ನು ಅಗರ್ತಲಕ್ಕೆ ಸ್ಥಳಾಂತರಿಸುವ ಮೊದಲು ಉದಯಪುರ್ ಮಾಣಿಕ್ಯ ವಂಶದ ರಾಜಧಾನಿ ಹಾಗೂ ಅಧೀಕೃತ ನಿವಾಸವಾಗಿತ್ತು. ಈ ದೇವಸ್ಥಾನವನ್ನು ಮೂರು ಅಡಿ ಎತ್ತರದ ಮುಖಮಂಟಪದಷ್ಟು ಎತ್ತರದಲ್ಲಿ ಕಟ್ಟಲಾಗಿದೆ. ಈ ದೇವಸ್ಥಾನದಲ್ಲಿ ನಾಲ್ಕು ಚಾಲ ಛಾವಣಿ, ಪ್ರವೇಶದ್ವಾರದಲ್ಲಿ ಸ್ತೂಪ ಹಾಗೂ ಗರ್ಭಗುಡಿ ಇವೆ. ಇಲ್ಲಿನ ಸ್ತೂಪ ಹಾಗೂ ಕಂಬಗಳಲ್ಲಿ ಹೂವಿನ ಆಕಾರದ ಕೆತ್ತನೆಯಿದೆ.
ತ್ರಿಪುರದಲ್ಲಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಪರಿಗಣಿಸಲ್ಪಡುವ ಈ ದೇವಸ್ಥಾನಕ್ಕೆ ಹಿಂದೂ ಭಕ್ತರು ಆಗಾಗ ಭೇಟಿ ನೀಡುತ್ತಾರೆ.