ಉತ್ತರಾಖಂಡ ಭಾರತದ ಸುಂದರ ರಾಜ್ಯವಾಗಿದೆ. ಇದರ ರಾಜಧಾನಿಯೇ ಡೆಹ್ರಾಡೂನ್. ದೇವಭೂಮಿ ಅಥವಾ ದೇವರ ನಾಡು ಎಂದೇ ಜನಪ್ರಿಯವಾಗಿರುವ ಉತ್ತರಾಖಂಡವು ಎಲ್ಲಾ ವಯೋಮಾನದವರಿಗೂ ನೆಚ್ಚಿನ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಇಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹ್ಯಾಂಗ್ ಔಟ್ ಮಾಡುವುದರ ಹೊರತಾಗಿ, ನಿಮ್ಮ ಸಂಗಾತಿಯೊಂದಿಗೆ ಸಹ ರೊಮ್ಯಾಂಟಿಕ್ ಕ್ಷಣಗಳನ್ನು ಕಳೆಯಬಹುದು. ಉತ್ತರಾಖಂಡದಲ್ಲಿ ಮಾತ್ರ ಹಿಮಾಲಯದ ಸೌಂದರ್ಯವನ್ನು ಬಹಳ ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು. ಆದರೆ ಇಲ್ಲಿ ಅನೇಕ ಸಂಸ್ಕೃತಿ ಮತ್ತು ನಾಗರಿಕತೆ ಸಹ ಕಾಣಬಹುದು.
ಇದುವರೆಗೂ ನೀವು ಉತ್ತರಾಖಂಡದ ಸುಂದರ ಕಣಿವೆಗಳನ್ನು ನೋಡಿರದಿದ್ದರೆ, ಐಆರ್ಸಿಟಿಸಿ (IRCTC ) ನಿಮಗೆ ಕಡಿಮೆ ಬಜೆಟ್ನಲ್ಲಿ ಉತ್ತರಾಖಂಡದ ಕೆಲವು ಸ್ಥಳಗಳಿಗೆ ಭೇಟಿ ನೀಡುವ ಅವಕಾಶವನ್ನು ತಂದಿದೆ. ಐಆರ್ಸಿಟಿಸಿ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಈ ಪ್ರವಾಸದ ಪ್ಯಾಕೇಜ್ನ ವಿವರಗಳನ್ನು ಹಂಚಿಕೊಂಡಿದೆ. ಈ ಪ್ಯಾಕೇಜ್ನಲ್ಲಿ ವಸತಿ, ಆಹಾರ ಮತ್ತು ಪ್ರಯಾಣ ವಿಮೆಯಿಂದ ಹಿಡಿದು ಅನೇಕ ಸೌಲಭ್ಯಗಳು ಲಭ್ಯವಿರುತ್ತವೆ. ಬನ್ನಿ ಹಾಗಾದರೆ ಈ ಪ್ಯಾಕೇಜ್ನ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯೋಣ...

ಪ್ಯಾಕೇಜ್ ಹೆಸರು: ಉತ್ತರಾಖಂಡ್ ಸಿಂಪ್ಲಿ ಹೆವೆನ್ ಎಕ್ಸ್ ಗೋರಖ್ಪುರ
ಪ್ಯಾಕೇಜ್ ಅವಧಿ: 5 ರಾತ್ರಿಗಳು ಮತ್ತು 6 ದಿನಗಳು
ಟ್ರಾವೆಲ್ ಮೋಡ್: ರೈಲು
ಏನೆಲ್ಲಾ ನೋಡಬಹುದು?
ಡೆಹ್ರಾಡೂನ್: ವಾರಾಂತ್ಯದಲ್ಲಿ ಎಲ್ಲೋ ಪ್ರಯಾಣಿಸುವಾಗ ನಮ್ಮ ಮನಸ್ಸಿಗೆ ಬರುವ ಮೊದಲ ಹೆಸರು ಡೆಹ್ರಾಡೂನ್. ಹಚ್ಚ ಹಸಿರಿನ ಮರಗಳು, ನೀಲಿ ಆಕಾಶ, ತಂಪಾದ ವಾತಾವರಣ, ಉತ್ತಮ ಆಹಾರ, ಇವೆಲ್ಲವೂ ಪ್ರವಾಸದಲ್ಲಿ ಆನಂದಿಸಬೇಕಾದರೆ ಹಿಮಾಲಯದ ತಪ್ಪಲಿನಲ್ಲಿ ನೆಲೆಸಿರುವ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ಗೆ ತೆರಳಿ. ತನ್ನ ಸುಂದರವಾದ ಹವಾಮಾನ ಮತ್ತು ಸುಂದರವಾದ ಭೂದೃಶ್ಯಗಳಿಗೆ ಇದು ಹೆಸರುವಾಸಿಯಾಗಿದೆ. ಉತ್ತರಾಖಂಡ ರಾಜ್ಯದ ಗರ್ವಾಲ್ ಹಿಮಾಲಯದ ಶಿಖರದಲ್ಲಿ ನೆಲೆಸಿರುವ ಡೆಹ್ರಾಡೂನ್ ಸಮುದ್ರ ಮಟ್ಟದಿಂದ 1400 ಅಡಿ ಎತ್ತರದಲ್ಲಿದೆ.
ಹರಿದ್ವಾರ: ಹರಿದ್ವಾರವು ಉತ್ತರಾಖಂಡ ರಾಜ್ಯದ ಗರ್ವಾಲ್ ಪ್ರದೇಶದಲ್ಲಿ ಗಂಗಾ ನದಿಯ ದಡದಲ್ಲಿದೆ. ನಗರವು ಅದರ ಆಶ್ರಮಗಳು, ದೇವಾಲಯಗಳ ಕಾರಣದಿಂದಾಗಿ ಬಹಳ ಪ್ರಸಿದ್ಧವಾಗಿದೆ. ಇಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಕುಂಭಮೇಳವನ್ನು ಆಯೋಜಿಸಲಾಗುತ್ತದೆ.

ಮಸ್ಸೂರಿ: ಮಸ್ಸೂರಿ ಪ್ರವಾಸಿ ತಾಣವು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ನೀವು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ನೋಡಬಹುದು. ಮಸ್ಸೂರಿಯನ್ನು "ಬೆಟ್ಟಗಳ ರಾಣಿ" ಎಂದೂ ಕರೆಯಲಾಗುತ್ತದೆ. ಮಸ್ಸೂರಿಯ ಎತ್ತರವು ಸಮುದ್ರ ಮಟ್ಟದಿಂದ ಸುಮಾರು 7000 ಅಡಿಗಳಷ್ಟು ಎತ್ತರದಲ್ಲಿದೆ.
ರಿಷಿಕೇಶ: ಹಿಮಾಲಯದ ತಪ್ಪಲಿನಲ್ಲಿರುವ ರಿಷಿಕೇಶ ಪ್ರವಾಸಿ ತಾಣವು ಪುರಾತನ ಮತ್ತು ಅನೇಕ ಭವ್ಯವಾದ ದೇವಾಲಯಗಳಿಂದಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇದಲ್ಲದೆ, ಈ ಸ್ಥಳವು ತನ್ನ ಜನಪ್ರಿಯ ಕೆಫೆಗಳು, ಯೋಗ ಆಶ್ರಮ ಮತ್ತು ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಸಾಹಸ ಕ್ರೀಡೆಗಳಿಂದಾಗಿ ರಿಷಿಕೇಶ ಸಾಕಷ್ಟು ಅಭಿವೃದ್ಧಿ ಹೊಂದಿದೆ.
ಪ್ಯಾಕೇಜ್ನಲ್ಲಿ ಈ ಸೌಲಭ್ಯವನ್ನು ಪಡೆಯುತ್ತೀರಿ...
1 . ಪ್ರಯಾಣಕ್ಕಾಗಿ ನೀವು ರೈಲಿನ 2AC/3AC ವರ್ಗದ ಟಿಕೆಟ್ಗಳನ್ನು ಪಡೆಯುತ್ತೀರಿ.
2 . ಉಳಿದುಕೊಳ್ಳಲು ಉತ್ತಮ ಹೋಟೆಲ್ ಸೌಲಭ್ಯಗಳು ಲಭ್ಯವಿರುತ್ತವೆ.
3 . ಈ ಪ್ರವಾಸದ ಪ್ಯಾಕೇಜ್ನಲ್ಲಿ ಉಪಹಾರ ಮತ್ತು ರಾತ್ರಿಯ ಊಟ ಲಭ್ಯವಿರುತ್ತದೆ.
4 . ನೀವು ಪ್ರಯಾಣ ವಿಮೆಯ ಸೌಲಭ್ಯವನ್ನು ಸಹ ಪಡೆಯುತ್ತೀರಿ.
ಪ್ಯಾಕೇಜ್ ಶುಲ್ಕದ ವಿವರ
1 . ಈ ಪ್ರವಾಸಕ್ಕೆ ನೀವು 3AC ಟಿಕೆಟ್ ತೆಗೆದುಕೊಂಡು ಒಬ್ಬರೇ ಪ್ರಯಾಣಿಸಿದರೆ 36,850 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
2 . ಆದರೆ ಇಬ್ಬರು ವ್ಯಕ್ತಿಗಳಿಗೆ 20,935 ರೂ.
3 . ಮೂರು ಜನರಾದರೆ ಪ್ರತಿ ವ್ಯಕ್ತಿಗೆ 16,880 ರೂ.
4 . ನೀವು ಮಕ್ಕಳಿಗೆ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಾಸಿಗೆಯೊಂದಿಗೆ (5-11 ವರ್ಷಗಳು) ನೀವು 12,425 ರೂ ಮತ್ತು ಹಾಸಿಗೆ ಇಲ್ಲದೆ ನೀವು 7,845 ರೂ. ಪಾವತಿಸಬೇಕಾಗುತ್ತದೆ.
ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ ಐಆರ್ಸಿಟಿಸಿ
ಐಆರ್ಸಿಟಿಸಿ ಈ ಪ್ರವಾಸದ ಪ್ಯಾಕೇಜ್ ಕುರಿತು ಮಾಹಿತಿಯನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದೆ. ಟ್ವೀಟ್ ನಲ್ಲಿ ನೀವು ಉತ್ತರಾಖಂಡದ ಸುಂದರ ದೃಶ್ಯ ನೋಡಲು ಬಯಸಿದರೆ IRCTC ಯ ಈ ಅದ್ಭುತ ಪ್ರವಾಸದ ಪ್ಯಾಕೇಜ್ನ ಲಾಭವನ್ನು ಪಡೆಯಬಹುದು ಎಂದು ಹೇಳಲಾಗಿದೆ.
ಈ ರೀತಿ ಬುಕ್ ಮಾಡಬಹುದು
ಐಆರ್ಸಿಟಿಸಿಯ ಅಧಿಕೃತ ವೆಬ್ಸೈಟ್ ಮೂಲಕ ನೀವು ಈ ಪ್ರವಾಸದ ಪ್ಯಾಕೇಜ್ಗಾಗಿ ಬುಕ್ ಮಾಡಬಹುದು. ಇದಲ್ಲದೆ, ಟ್ವೀಟ್ ನಲ್ಲಿ ಟೂರಿಸ್ಟ್ ಫೆಸಿಲಿಟೇಶನ್ ಸೆಂಟರ್, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕವೂ ಬುಕ್ಕಿಂಗ್ ಮಾಡಬಹುದು. ಪ್ಯಾಕೇಜ್ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ನೀವು IRCTC ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.


Click it and Unblock the Notifications















