ಕೊಡಗು ಜಿಲ್ಲೆಯ ವಿರಾಜಪೇಟೆ , ಸ್ಥಳೀಯವಾಗಿ ಬೆಳೆವ ಕಾಫಿ ಹಾಗೂ ಸಾಂಬಾರ ಪದಾರ್ಥಗಳಿಗೆ ಪ್ರಖ್ಯಾತವಾಗಿದೆ. ಹಿಂದೂಗಳ ದೇವರಾದ ಶಿವನಿಗೆ ಅರ್ಪಿತವಾದ ಶ್ರೀ ಅಯ್ಯಪ್ಪ ದೇಗುಲ ಈ ಪಟ್ಟಣದ ಪ್ರಮುಖ ಆಕರ್ಷಣೆ. ಹಿಂದೂಗಳ ಪವಿತ್ರಸ್ಥಳವೆಂದು ಪರಿಗಣಿಸಲ್ಪಡುವ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ವರ್ಷಪೂರ್ತಿ ಭೇಟಿ ನೀಡುತ್ತಾರೆ.ಮಲೆತ್ರಿಕೆರೆ ಬೆಟ್ಟದ ಮೇಲಿರುವ ಈ ದೇಗುಲ ಪಟ್ಟಣದ ವಿಹಂಗಮ ನೋಟವನ್ನೊದಗಿಸುತ್ತದೆ.ವಿರಾಜಪೇಟೆಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿಂದ 8 ಕಿಲೋಮೀಟರ್ ದೂರದಲ್ಲಿರುವ ಅರ್ಧ ಗೋಳಾಕಾರದ ಕಕೋಟುಪುರಂಟು ಬೆಟ್ಟವನ್ನು ವೀಕ್ಷಿಸಬಹುದು. ಸಂತ ಆನ್ರ ಚರ್ಚ್ ಇಲ್ಲಿನ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆ. ಗಾಥಿಕ್ ಶಿಲ್ಪಶೈಲಿಯ ಈ ಚರ್ಚ್ 200 ವರ್ಷಗಳ ಹಿಂದೆ ಪಾದ್ರಿ ಗಲಿವಾನ್ರ ಮಾರ್ಗದರ್ಶನದಲ್ಲಿ ಕಟ್ಟಲ್ಪಟ್ಟಿದೆ. ನಗರದ ಮಧ್ಯಭಾಗದಲ್ಲಿರುವ ಗಡಿಯಾರ ಗೋಪುರವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸನಿಹದಲ್ಲೇ ಇರುವ ಗಣೇಶನ ಗುಡಿ ಮತ್ತೊಂದು ಜನಪ್ರಿಯ ಪ್ರವಾಸಿ ಆಕರ್ಷಣೆ. ತಡಿಯಾಂಡಮೋಲ್ಗೆ ಬರುವ ಎಲ್ಲಾ ಪ್ರವಾಸಿಗರು ತಪ್ಪದೇ ಭೇಟಿ ನೀಡಿರಿ.


Click it and Unblock the Notifications