ತಮಿಳಿನಾಡಿನ ತಂಜಾವೂರಿನಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯ ಪುನೈನಲ್ಲೂರು ಮಾರಆಮ್ಮನ್ ದೇವಾಲಯ. ಇಲ್ಲಿನ ಪುರಾಣ ಕಥೆಗಳ ಪ್ರಕಾರ, ಇಲ್ಲಿನ ರಾಜನಾಗಿದ್ದ ವೆಂಕೋಜಿ ಮಹಾರಾಜಾ ಛತ್ರಪತಿಯ ಕನಸಿನಲ್ಲಿ ಮಾರಿಅಮ್ಮನ್ ಬಂದು ತಂಜಾವೂರಿನಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಪುನ್ನಾ ಮರಗಳಿರುವ ಕಾಡಿನಲ್ಲಿ ಅವಳ ವಿಗ್ರಹವೊಂದು ರಚನೆಯಾಗಿದೆ ಎಂದು ಹೇಳಿದಳು.
ಅಲ್ಲಿಗೆ ಹೋಗಿ ವಿಗ್ರಹವನ್ನು ಹುಡುಕಿದ ಬಳಿಕ ಅದೇ ಸ್ಥಳದಲ್ಲಿ ದೇವಾಲಯವನ್ನು ಕಟ್ಟಲಾಯಿತು. ಈ ರೀತಿಯಾಗಿ ಈ ಸ್ಥಳಕ್ಕೆ ಪುನ್ನೈನಲ್ಲೂರು ಮಾರಿಅಮ್ಮನ್ ಎಂಬ ಹೆಸರು ಬಂದಿತು. ಈ ಸ್ಥಳದ ಬಗ್ಗೆ ಇರುವ ಇನ್ನೊಂದು ಕಥೆಯ ಪ್ರಕಾರ, ಇಲ್ಲಿನ ದೇವತೆ ಈ ಪ್ರದೇಶದ ಎಲ್ಲಾ ಜನರಿಗೂ ದೈಹಿಕವಾಗಿ ಯಾವುದೇ ತೊಂದರೆ ಬಂದರೂ ನಿವಾರಿಸುತ್ತಾಳೆ. 18 ನೇ ಶತಮಾನದ ಆರಂಭದಲ್ಲಿ ತಂಜಾವೂರಿನ ರಾಜನ ತುಲಜಾ ರಾಜನ ಮಗಳು ಯಾವುದೋ ಕಾಯಿಲೆಯಿಂದ ದೃಷ್ಟಿ ಕಳೆದುಕೊಂಡಾಗ ದೇವಸ್ಥಾನಕ್ಕೆ ಅರ್ಪಿಸಿದ ಪೂಜೆಯ ಕಾರಣದಿಂದ ಅವಳು ದೃಷ್ಟಿಯನ್ನು ಮರಳಿ ಪಡೆದಿದ್ದಳು.