ಛಟ್ಟಿ ಪದಾಶನಿ ಗುರುದ್ವಾರದ ಕಾರಣದಿಂದ ರೈನವಾರಿ ಶ್ರೀನಗರದ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಪ್ರಮುಖ ಧಾರ್ಮಿಕ ಸ್ಥಳದ ಹೊರತಾಗಿ, ಛಟ್ಟಿ ಪದಶಾಹಿ ಗುರುದ್ವಾರ ಸಹ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಸಿಖ್ಖರ ಆರನೇ ಗುರು ಹರಗೊಬಿಂದ್ಸಿಂಗ್, ನಿರ್ಮಿಸಿದ್ದನು ಎಂದು ನಂಬಲಾಗಿರುವ ಈ ಸ್ಥಳಕ್ಕೆ ಸಿಖ್ ಭಕ್ತರು ತಮ್ಮ ಪ್ರಾರ್ಥನೆಗಳನ್ನು ಅರ್ಪಿಸಲು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಗುರು ಹರಗೋಬಿಂದ್ ಸಿಂಗ್ ಕಾಶ್ಮೀರದ ಎಲ್ಲಾ ಭಾಗಗಳಿಗೆ ಪ್ರಯಾಣ ಮಾಡುವಾಗ, ತಾವು ಬೋಧಿಸುತ್ತಿದ್ದ ಕಡೆಯಲ್ಲೆಲ್ಲ ಗುರುದ್ವಾರಗಳನ್ನು ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ. ಶ್ರೀನಗರದ ಛಟ್ಟಿ ಪದಷಾಹಿಗುರುದ್ವಾರ ಈ ಗುರುದ್ವಾರಗಳಲ್ಲಿ ಒಂದು ಎಂದು ಹೇಳಲಾಗಿದೆ.
ಗುರುದ್ವಾರ, ಹರಿ ಪರ್ವತ/ಪರ್ಬತ್ ಫೋರ್ಟ್ ಅಥವಾ ಮೊಘಲ್ ಕೋಟೆಯ ದಕ್ಷಿಣಕ್ಕಿದ್ದು, ಸಿಖ್ ಸಮುದಾಯದ ಪ್ರಮುಖ ಸ್ಥಾನವನ್ನು ಪ್ರತಿನಿಧಿಸುತ್ತದೆ. ಛಿಟ್ಟಿ ಪದಷಾಹಿಗುರುದ್ವಾರ ರಾಜ್ಯದ ಎಲ್ಲಾ ಗುರುದ್ವಾರದಲ್ಲಿ ಪ್ರಮುಖ ಗುರುದ್ವಾರ ಎಂದು ಪರಿಗಣಿಸಲಾಗಿದೆ. ಸುತ್ತಲೂ ಬೆಟ್ಟಗಳು ಸುತ್ತುವರಿದಿದ್ದು, ರೈನ್ವಾರಿ ವರ್ಷದ ಎಲ್ಲಾ ಅವಧಿಗಳಲ್ಲೂ ಆಹ್ಲಾದಕರ ಮತ್ತು ತಂಪಾದ ಹವಾಮಾನವನ್ನು ಹೊಂದಿರುತ್ತದೆ.


Click it and Unblock the Notifications