ಅನಾಥಪಿಂಡಿಕಾ ಸ್ತೂಪ ಅತ್ಯಾಕರ್ಷಕ ಸ್ತೂಪವಾಗಿದ್ದು ಬುದ್ದನ ಪರಮಭಕ್ತ ನಿರ್ಮಿಸಿದ್ದು(ಅನಾಥಪಿಂಡಿಕಾ ಒಬ್ಬ ದಯೆಯುಳ್ಳ ಶ್ರೀಮಂತ ಮನುಷ್ಯನಾಗಿದ್ದನು ಮತ್ತು ಬುದ್ಧನ ಪರಮಭಕ್ತನಾಗಿದ್ದನು, ಆತನಿಂದಲೇ ಸ್ತೂಪಕ್ಕೆ ಈ ಹೆಸರು). ಅಕ್ಷರಶಃವಾಗಿ ಸ್ತೂಪದ ಅರ್ಥವೇನಂದರೆ ಕೈಲಾದವನಿಗೆ ಸಹಾಯ ಮಾಡುವುದು. ಪ್ರಸಕ್ತ ಈ ಸ್ತೂಪವು ಅವಶೇಷವಾಗಿದ್ದರೂ, ಅದರ ಮೇಲಿನ ಸುಂದರ ಕಲಾಕೃತಿಗಳು, ವಾಸ್ತು ಶಿಲ್ಪಗಳು ಸಹಸ್ರಾರು ಚರಿತ್ರಗಾರರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ನಂಬಿಕೆಯ ಪ್ರಕಾರ, ಬುದ್ದ ದೇವನು ಶ್ರಾವಸ್ತಿಗೆ ಅನಾಥಪಿಂಡಿಕಾ ಆಹ್ವಾನದ ಮೇರೆಗೆ ಬಂದಿದ್ದರು, ರಾಜಗಹಾದಲ್ಲಿ ಅವರನ್ನು ಭೇಟಿಯಾಗಿದ್ದರು. ಅನಾಥಪಿಂಡಿಕಾ ಸ್ತೂಪವನ್ನು ಅವರ ಭೇಟಿಯ ಸ್ಮರಣಾರ್ಥಕವಾಗಿ ನಿರ್ಮಿಸಲಾಯಿತು ಎನ್ನುವುದು ನಂಬಿಕೆ.


Click it and Unblock the Notifications