ಸಹೇಥ್ ಶ್ರಾವಸ್ತಿ ನಗರದ ಹೃದಯ ಭಾಗದಲ್ಲಿವೆ ಮತ್ತು ಕಟ್ಟಾ ಬುದ್ದ ಧರ್ಮದ ಪಾಲಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಬುದ್ದರ ದೇವಾಲಯದ ಇತಿಹಾಸಕ್ಕೆ ಪ್ರಸಿದ್ದಿಯಾಗಿದೆ. ಈ ಪ್ರದೇಶವನ್ನು ಹಿಂದೂ ಪುರಾಣದಲ್ಲೂ ಹಲವು ಬಾರಿ ಉಲ್ಲೇಖಿಸಲಾಗಿದೆ. ಹಲವು ವರ್ಷಗಳಿಂದ ಕಡೆಗಣಿಸಲಾಗಿದ್ದರೂ ಮಧ್ಯಕಾಲೀಯದಿಂದಲೂ ಸಹೇಥ್ ಜ್ಞಾನಾರ್ಜನೆಗೆ, ತರಬೇತಿಗೆ ಮತ್ತು ಆರಾಧಕರಿಗೆ ಪುರಾತನ ವರ್ಷದಿಂದಲೂ ಹೆಸರುವಾಸಿ.
ಚರಿತ್ರಾರ್ಹರು ಮತ್ತು ಭೂಶೋಧಕರು ಇದು ಜೇತವನ ಆಶ್ರಮದ ಮೂಲ ಸ್ಥಾನವೆಂದು ಅರಿತ ನಂತರ, ಈ ಪ್ರದೇಶವು ಬುದ್ದ ಧರ್ಮೀಯರಿಗೆ ಹೆಸರುವಾಸಿಯಾಯಿತು. ಈಗ ಹೆಚ್ಚಿನ ಪ್ರದೇಶಗಳು ಧ್ವಂಸವಾಗಿದ್ದರೂ ಪ್ರವಾಸಿಗರು ಮತ್ತು ಬೌದ್ದ ಧರ್ಮೀಯರು ಇಲ್ಲಿಗೆ ಭೇಟಿ ನೀಡುತ್ತಾರೆ.
ದೇವಾಲಯದ ಸ್ವರೂಪಗಳು ಮತ್ತು ಸ್ತೂಪಗಳು ಭೂಶೋಧನೆಯ ಸಮಯದಲ್ಲಿ ಪತ್ತೆಯಾದವು. ಸ್ತೂಪಗಳು, ಕೌಶಾನಾ ಕಾಲದಾಗಿದ್ದು ಗುಪ್ತರ ಕಾಲದಲ್ಲಿ ನಿರ್ಮಾಣವಾಗಿದ್ದು. ಅದರಲ್ಲಿ ಕೆಲವೊಂದು ಮೂರನೇ ಮೌರ್ಯನ ಕಾಲದ್ದು ಮತ್ತು ಹನ್ನರಡನೇ ಶತಮಾನದ್ದು.