ಶ್ರವಣಬೆಳಗೊಳಕ್ಕೆ ಪ್ರವಾಸ ಬೆಳೆಸಿದ ಪ್ರತಿಯೊಬ್ಬರೂ ಕೂಡಾ ಗೊಮ್ಮಟೇಶ್ವರ ಮೂರ್ತಿಯನ್ನು ನೋಡಲೇಬೇಕು. ಶ್ರವಣಬೆಳಗೊಳದಲ್ಲೇ ಇದು ಪ್ರಮುಖ ಆಕರ್ಷಣೀಯ ಸ್ಥಳ. ಜಗತ್ತಿನಲ್ಲೇ ಅತಿ ದೊಡ್ಡ ಏಕಶಿಲಾ ವಿಗ್ರಹವಿದು. 17 ಮೀಟರ್ (58 ಅಡಿ) ಎತ್ತರದ ಈ ವಿಗ್ರಹ ಏಕಶಿಲೆಯಿಂದ ನಿರ್ಮಾಣಗೊಂಡಿದ್ದು. ಗಂಗ ಸಾಮ್ರಾಜ್ಯದ ರಾಜಮಲ್ಲ ಮತ್ತು ಆತನ ಜನರಲ್ ಚಾಮುಂಡರಾಯನಿಂದ ನಿರ್ಮಾಣಗೊಂಡಿದೆ.ಈ ಪ್ರದೇಶವನ್ನು ತಲುಪುತ್ತಿದ್ದಂತೆಯೇ, ಪ್ರವಾಸಿಗರು ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬರೆದ ಶಿಲಾಶಾಸನವನ್ನು ನೊಡಬಹುದು. ಈ ಶಿಲಾಶಾಸನಗಳು ರಾಜನ ಶ್ರಮದ ಬಗ್ಗೆ ಹೊಗಳಿಕೆ ಮತ್ತು ಗೊಮ್ಮಟೇಶ್ವರನ ಮೂರ್ತಿಯನ್ನು ನಿರ್ಮಿಸಿದ ಜನರಲ್ ಬಗ್ಗೆ ಹೊಗಳಿಕೆಯನ್ನು ಹೊಂದಿವೆ.ಸಾವಿರಾರು ಭಕ್ತರು, ಅದರಲ್ಲೂ ಜೈನರು ಹೆಚ್ಚಾಗಿ ಶ್ರವಣಬೆಳಗೊಳ ನಗರಕ್ಕೆ ಮಹಾಮಸ್ತಾಭಿಷೇಕದ ಸಮಯದಲ್ಲಿ ಭೇಟಿ ನೀಡುತ್ತಾರೆ. ಈ ಮಹಾಮಸ್ತಕಾಭಿಷೇಕವು 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಹಬ್ಬದಲ್ಲಿ ಗೊಮ್ಮಟೇಶ್ವರ ಮೂರ್ತಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಕೇಸರಿ, ತುಪ್ಪ, ಹಾಲು, ಮೊಸರು, ಚಿನ್ನದ ನಾಣ್ಯ ಮತ್ತು ಹಲವು ವಸ್ತುಗಳಿಂದ ಈ ಏಕಶಿಲಾ ವಿಗ್ರಹಕ್ಕೆ ಅಭಿಷೇಕ ಮಾಡಿಸಲಾಗುತ್ತದೆ.