ಪ್ರವಾಸಿಗರು ಶಿರಸಿಗೆ ಭೇಟಿಕೊಡುವ ಯೋಜನೆ ಹೊಂದಿದ್ದರೆ ಅವರು ಅಲ್ಲಿನ ಗೋಪಾಲಕೃಷ್ಣ ದೇವಾಲಯಕ್ಕೆ ಭೇಟಿ ಕೊಡಬಹುದು. ಈ ದೇವಾಲಯವು ಮಹಾಗಣಪತಿ ಮತ್ತು ಮಾರಿಕಾಂಬ ದೇವಾಲಯಗಳಿಗೆ ಸಮೀಪದಲ್ಲಿ ಇದೆ. ಇದು ವಾಸುದೇವ ಶ್ರೀ ಕೃಷ್ಣನ ದೇವಾಲಯವಾಗಿದ್ದು 1886ರಲ್ಲಿ ಕಟ್ಟಲಾಗಿದೆ. ಯಾತ್ರಾರ್ಥಿಗಳು ಇತರ ಎರಡು ದೇವಾಲಯಗಳಿಗೆ ಹೋಗುವ ಹಾದಿಯಲ್ಲಿ ಇಲ್ಲಿ ನಿಂತು ದರ್ಶನ ಪಡೆದು ಹೋಗಬಹುದು.ಪ್ರತಿ ಗುರುವಾರವು ಇಲ್ಲಿ ಪ್ರಶ್ನಾ ಸೇವೆ ನಡೆಯುತ್ತದೆ. ಆಗ ಜನರು ತಮ್ಮ ತಮ್ಮ ಪ್ರಶ್ನೆಗಳನ್ನು ಮತ್ತು ಸಂಶಯಗಳನ್ನು ಇಲ್ಲಿ ಕೇಳಬಹುದು. ಅವರಿಗೆ ಇಲ್ಲಿನ ಪ್ರಧಾನ ಅರ್ಚಕರಾದ ಶ್ರೀ ವಿಠಲಾಚಾರ್ಯರು ಉತ್ತರಿಸುತ್ತಾರೆ. ಇವರು ತಮ್ಮ ಅಖಂಡ ಜ್ಯೋತಿಷ್ಯ ಙ್ಞಾನಕ್ಕೆ ಪ್ರಸಿದ್ಧಿ ಪಡೆದಿದ್ದಾರೆ. ಈ ದೇವಾಲಯವು ಶ್ರೀ ಕೃಷ್ಣ ಜಯಂತಿ, ಭದ್ರಪದ ಶುಕ್ಲ ಚತುರ್ದಶಿಯಂದು ನಡೆಯುವ ಅನಂತವ್ರತ ಅರ್ಚನ ಪೂಜೆ, ವೈಶಾಖ ಶುಕ್ಲ ಸಪ್ತಮಿ ಪೂಜೆಯಂದು ನಡೆಯುವ ಜಯಂತಿ ಉತ್ಸವ ಮತ್ತು ಗೋಪಾಲಕಾಲ- ಭಾದ್ರಪದ ಶುಕ್ಲ ತ್ರಯೋದಶಿಯಂದು ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ.