ಪ್ರವಾಸಿಗರಿಗೆ ಶಿರಸಿಗೆ ಹೋದಾಗ ಸಮಯಾವಕಾಶ ದೊರೆತರೆ ಇಲ್ಲಿನ ಮಹಾಗಣಪತಿ ದೇವಾಲಯಕ್ಕೊಮ್ಮೆ ಭೇಟಿ ಕೊಡಬಹುದು. ಇದು ಶಿರಸಿಯ ಪ್ರಸಿದ್ಧ ಮಾರಿಕಾಂಬ ದೇವಾಲಯಕ್ಕೆ ಸಮೀಪದಲ್ಲಿದೆ. ಇಲ್ಲಿನ ಅರ್ಚಕರು ಜಾತಕ ನೋಡದೆ ಜನರ ಭವಿಷ್ಯವನ್ನು ಹೇಳುತ್ತಾರೆ. ಅಲ್ಲದೆ ಭಕ್ತರು ಕೇಳುವ ಪ್ರಶ್ನೆಗಳಿಗೆ ಸ್ವಾಮಿ ಗಣೇಶನ ತೀರ್ಪನ್ನು ಸಹ ಹೇಳುತ್ತಾರೆ.