ಶಿವಪುರಿಯಿಂದ 20 ಕಿ.ಮೀ. ದೂರದ ಕರೇರದಲ್ಲಿ ಈ ಪಕ್ಷಿಧಾಮವಿದೆ. ವಿನಾಶದ ಅಂಚಿನಲ್ಲಿರುವ ಅನೇಕ ಜಾತಿಯ ಪಕ್ಷಿಗಳು ಈ ಪಕ್ಷಿಧಾಮದಲ್ಲಿವೆ. ಪ್ರವಾಸಿಗರನ್ನು ಮತ್ತೊಂದು ಅದ್ಭುತ ಜಗತ್ತಿಗೆ ಕರೆದೊಯ್ಯಬಲ್ಲ ಶಕ್ತಿ ಈ ಪಕ್ಷಿಧಾಮಕ್ಕಿದೆ. ಸಹಜವಾದಿ ರೀತಿಯಲ್ಲಿ ತಮ್ಮ ಜೀವನವನ್ನು ರೂಪಿಸಿಕೊಂಡ ಪಕ್ಷಿಗಳನ್ನು ನಾವು ಇಲ್ಲಿ ಕಾಣಬಹುದು. ವಿನಾಶದಂಚಿನಲ್ಲಿರುವ ಸನ್ ಚಿರೈಯಾ, ಇಂಡಿಯನ್ ಬಸ್ಟರ್ಡ್ ಮುಂತಾದ ಪಕ್ಷಿಗಳು ಇಲ್ಲಿ ಮಾತ್ರ ಕಾಣಲು ಸಾಧ್ಯ.
ಮಾನವ ತನ್ನ ಸ್ವಾರ್ಥ ಸಾಧನೆಗೆ ಕಾಡು ಕಡಿದು ನಗರೀಕರಣ ಮಾಡುವ ಪ್ರಯತ್ನದಲ್ಲಿ ಇಂತಹ ಅಪರೂಪದ ಪಕ್ಷಿಗಳು ಕಣ್ಮರೆಯಾಗುವ ಸ್ಥಿತಿಗೆ ಬಂದಿವೆ. ಸರಕಾರ ಈ ಪಕ್ಷಿಗಳನ್ನು ಸಂರಕ್ಷಿಸುವಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಈ ಪಕ್ಷಿಧಾಮದಲ್ಲಿ ಇಂತಹ ಅಪರೂಪದ ಪಕ್ಷಿಗಳು ಸಾಯದಂತೆ ವಾತಾವರಣವನ್ನು ಸೃಷ್ಟಿಸಲಾಗಿದೆ. ವನ್ಯಜೀವಿ ಪ್ರೇಮಿಗಳು ಕಾಂಕ್ರೀಟ್ ಜಂಗಲ್ ನಿಂದ ದೂರವಾಗಿ ಇಲ್ಲಿ ಪ್ರಕೃತಿ ಮಡಿಲಲ್ಲಿ ಆನಂದವಾಗಿ ಕಳೆಯಬಹುದು.