ಗಣಪತಿ ಮಂದಿರವು ಸಾಂಗ್ಲಿ ಜಿಲ್ಲೆಯಲ್ಲಿಯೆ ಪ್ರಸಿದ್ಧವಾದ ಧಾರ್ಮಿಕ ಸ್ಮಾರಕವಾಗಿದೆ. ಇದನ್ನು 1811 ರಿಂದ 1844 ರ ಅವಧಿಯಲ್ಲಿ ನಿರ್ಮಿಸಲಾಯಿತು.ಸಾಂಗ್ಲಿಯ ರಾಜಸಾಹೇಬ್ ಆದ ಅಪ್ಪಾಸಾಹೇಬ್ ಪಟವರ್ಧನರು ಇದನ್ನು ನಿರ್ಮಿಸಿದರು. ಇದರ ನಿರ್ಮಾಣಕ್ಕೆ ಮೂವತ್ತು ವರ್ಷಗಳ ಸಮಯ ಹಿಡಿಯಿತು.
ಈ ದೇವಾಲಯವನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿ ಮತ್ತು ಲೋಕ ಮಾನ್ಯ ತಿಲಕರಂತಹ ಸ್ವಾತಂತ್ರ್ಯಹೋರಾಟಗಾರರು ಉಪಯೋಗಿಸಿಕೊಂಡರು.
ಈ ದೇವಾಲಯವು ಕೆತ್ತನೆಗಳಿಂದ ಕೂಡಿದ ಕಪ್ಪುಕಲ್ಲಿನ ಗೋಡೆಗಳಿಂದ ಮತ್ತು ದ್ವಾರಗಳಿಂದಾಗಿ ನಮ್ಮನ್ನು ಆಕರ್ಷಿಸುತ್ತದೆ. ಈ ದೇವಾಲಯವು ಎರಡು ಎಕರೆಗು ಮೇಲ್ಪಟ್ಟ ಪ್ರದೇಶದಲ್ಲಿ ವ್ಯಾಪಿಸಿದ್ದು, ನೋಡಲೆ ಬೇಕಾದ ಸ್ಥಳವಾಗಿದೆ.