ಸ್ವರ್ಗ ಆಶ್ರಮ ರಿಷಿಕೇಶದಿಂದ 5 ಕಿಲೋ ಮೀಟರ್ ದೂರದಲ್ಲಿದ್ದು ಗಂಗಾ ನದಿಯ ಪೂರ್ವದಲ್ಲಿದೆ. ಪ್ರಸಿದ್ದ ಸಂತ ವಿಶುಧಾನಂದ ಅಥವಾ ಕಾಲಿ ಕಾಮ್ಲಿ ವಾಲಾ ಗೌರವಾರ್ಥ ಇದನ್ನು ಕಟ್ಟಲಾಗಿದೆ. ಆವರಣದೊಳಗೆ ಹ್ತತಾರು ಆಶ್ರಮಗಳನ್ನು ಅಂಗಡಿ, ಕೆಫೆ, ಪಾರ್ಕ್, ಆಯುರ್ವೇದಿಕ್ ಡಿಸ್ಪೆನ್ಸರಿ, ಗ್ರಂಥಾಲಯ, ಧಾರ್ಮಿಕ ಧ್ಯಾನ ಕೇಂದ್ರಗಳು, ಹೊಟೇಲು ಮತ್ತು ರೆಸ್ಟಾರೆಂಟ್ ಸಮೇತ ಕಟ್ಟಲಾಗಿದೆ. ಹುಟ್ಟು ಮತ್ತು ಸಾವಿಗೆ ಸಂಭವಿಸಿದಾಗ ಮಾಡಲಾಗುವ ಹಲವಾರು ಆಚರಣೆಗಳನ್ನು ಈ ಆಶ್ರಮದಲ್ಲಿ ಕೈಗೊಳ್ಳಲಾಗುತ್ತದೆ. ರಾಮ್ ಝೂಲಾದ ಮೂಲಕ ಈ ಆಶ್ರಮವನ್ನು ತಲುಪಬಹುದಾಗಿದೆ. ಆಶ್ರಮದೊಳಗೆ ದೇವಸ್ಥಾನ, ಗುಹೆಗಳು ಮತ್ತು ವಿದ್ಯಾರ್ಥಿ ನಿಲಯಗಳಿವೆ.


Click it and Unblock the Notifications