ವಿಲ್ಲುಂದಿ ತೀರ್ಥಂ ಹಿಂದೂ ಧರ್ಮದ ಪ್ರಕಾರ ಭೇಟಿ ಮಾಡಲೇ ಬೇಕಾದಂತಹ ಸ್ಥಳವಾಗಿದ್ದು ಇಲ್ಲಿನ 24 ತೀರ್ಥಂ ಗಳಲ್ಲಿ ಒಂದಾಗಿದೆ. ರಾಮ ತನ್ನ ಪತ್ನಿ ಸೀತೆಗೆ ಕುಡಿಯುವ ನೀರನ್ನು ಒದಗಿಸಲು, ಸಮುದ್ರದಲ್ಲಿ ಬಾಣ ಹೊಡೆದು ಈ ತೀರ್ಥಂ ನ್ನು ಹುಟ್ಟುಹಾಕಿದನು ಎಂಬ ಪ್ರತೀತಿ ಇದೆ. ಇದರ ಪರಿಣಾಮವಾಗಿ ಕುಡಿಯಲು ರುಚಿಕರವಾದ ನೀರು ದೊರಕಿತು.
ಪ್ರತಿವರ್ಷ ಈ ತೀರ್ಥಂಗೆ ತಮ್ಮ ಪಾಪಳಿಂದ ವಿಮುಕ್ತಿ ಪಡೆಯಲು ನೀರಿನಲ್ಲಿ ಸ್ನಾನ ಮಾಡಲು ಸಾವಿರಾರು ಹಿಂದೂ ಭಕ್ತರು ಭೇಟಿ ನೀಡುತ್ತಾರೆ. ಈ ತೀರ್ಥಂ ಪಂಬನ್ ಹತ್ತಿರವಾಗಿರುವ ತಂಗಚ್ಚಿಮಾಡಂ ಗ್ರಾಮದಲ್ಲಿದೆ.
ಧಾರ್ಮಿಕ ಪ್ರಾಮುಖ್ಯತೆಯ ಹೊರತಾಗಿ, ಈ ನೀರು ಗ್ರಾಮದ ಸ್ಥಳೀಯರಿಗೆ ಗಮನಾರ್ಹವಾಗಿದೆ. 1979 ರಲ್ಲಿ, ಒಂದು ರಚನೆಯನ್ನು ಸ್ಥಳೀಯ ಜನಸಂಖ್ಯೆ ಕುಡಿಯುವ ನೀರಿನ ಮೂಲವಾಗಿ ನಿರ್ಮಿಸಲಾಗಿತ್ತು. ಆದಾಗ್ಯೂ, ಈಗ ಗಾಳಿಯಲ್ಲಿರುವ ಉಪ್ಪಿನ ಅಂಶದ ಕಾರಣದಿಂದ ಈ ತೀರ್ಥದ ಬಾವಿ ಹಾಳಾಗುತ್ತಿದ್ದು ಸ್ಥಳೀಯರ ಚಿಂತೆಗೆ ಕಾರಣವಾಗಿದೆ. ಸರ್ಕಾರದಿಂದ ಇದನ್ನು ಸರಿಪಡಿಸಲು ಮತ್ತೊಂದು ರಚನೆ ನಿರ್ಮಿಸಲು ಪ್ರಯತ್ನಗಳನ್ನು ಮಾಡಲಾಗುತ್ತದೆ.