ಶಿವನನ್ನು ಪೂಜಿಸುವ ಉತ್ತಿರಕೋಸಮಂಗಾಯ್ ದೇವಾಲಯ ತಮಿಳುವಾಡಿನ ರಾಮನಾಥಪುರಂ ಜಿಲ್ಲೆಯಲ್ಲಿದೆ. ಮತ್ತು ಪ್ರತಿವರ್ಷ ಸಾವಿರಾರು ಶೈವರನ್ನು ಆಕರ್ಷಿಸುತ್ತದೆ. ಈ ದೇವಾಲಯದ ಬಗ್ಗೆ ಸಂಸ್ಕೃತ ಶ್ಲೋಕ, ಗ್ರಂಥಗಳಲ್ಲಿಯೂ (ಮಾನಿಕ್ಕಾವ ಸಾಗರ ಶ್ಲೋಕಗಳು) ನಮೂದಿಸಿರುವುದನ್ನು ಕಾಣಬಹುದು. ಈ ದೇವಾಲಯಕ್ಕೆ ಪರಮ್ಮಕುಡಿ ಹಾಗೆಯೇ ರಾಮನಾಥಪುರಂ ನಿಂದ ಸುಲಭವಾಗಿ ತಲುಪಬಹುದು.
ದೇವಾಲಯವು ಸೇತು ಮಾಧವ ತೀರ್ಥಂ, ಲಕ್ಷ್ಮಣ ತೀರ್ಥಂ ಮತ್ತು ರಾಮನಾಥಪುರಂ ನಂತೆ ಹಿಂದೂಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುವ ದೇವಾಲಯವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ದೇವಾಲಯವನ್ನು ದೇಶಾದ್ಯಂತ ಹಿಂದೂಗಳು ಆಳವಾಗಿ ಬಹಳ ಭಕ್ತಿಯಿಂದ ಪೂಜಿಸುತ್ತಾರೆ.ಬಹಳ ಹಳೆಯ ಮರಗತ ನಟರಾಜ ವಿಗ್ರಹ ದೇವಸ್ಥಾನದ ಆವರಣವನ್ನು ಅಲಂಕರಿಸಿದೆ. ಈ ನಟರಾಜ ವಿಗ್ರಹದ ಬಗ್ಗೆ ಅನನ್ಯ ಲಕ್ಷಣವೆಂದರೆ ಅದನ್ನು ಪಚ್ಚೆ ಹರಳುಗಳಿಂದ ಕೆತ್ತನೆ ಮಾಡಲಾಗಿದೆ.
ಅರುದ್ರ ವಾರ್ಷಿಕ ಉತ್ಸವದ ಡಿಸೆಂಬರ್ ತಿಂಗಳಲ್ಲಿ ದೇವಸ್ಥಾನದಲ್ಲಿ ನಡೆಯುತ್ತದೆ. ಎಲ್ಲಾ ಶಿವ ಭಕ್ತರು ಇದು ದೇವಾಲಯಕ್ಕೆ ಈ ಸಮಯದಲ್ಲಿ ಭೇಟಿ ನೀಡಿ ದೇವರ ಆಶೀರ್ವಾದಕ್ಕೆ ಭಾಜನರಾಗುತ್ತಾರೆ. ಪ್ರವಾಸಿಗರು ಸಹ ಉಲ್ಲಾಸಕರ ಉತ್ಸವಾಚರಣೆಗಳ ಭಾಗವಾಗಿ ಡಿಸೆಂಬರ್ ತಿಂಗಳಲ್ಲಿ ದೇವಾಲಯಕ್ಕೆ ಬಂದು ಸೇರುತ್ತಾರೆ.


Click it and Unblock the Notifications