ವೇಣು ವನ ಒಂದು ಕೃತಕ ಉದ್ಯಾನವನವಾಗಿದ್ದು, ಶಾಂತಿ ಮತ್ತು ಧ್ಯಾನಕ್ಕೆ ಯೋಗ್ಯ ಸ್ಥಳವಾಗಿದೆ. ರಾಜ ಬಿಂಬಸಾರ ಬುದ್ಧನ ನೆನಪಿಗಾಗಿ ಈ ಸುಂದರ ಮಠ ನಿರ್ಮಿಸಿದನು. ಇಲ್ಲಿ ಸನ್ಯಾಸಿಗಳನ್ನು ಕಾಣಬಹುದು.
ಇದು ರಾಜಗೀರ್ ನ ಕೋಟೆಗಳ ನಿರ್ಮಾಣಕ್ಕಾಗಿ ಉಪಯೋಗಿಸಲಾಗುತ್ತಿದ್ದ ಒಂದು ಬಗೆಯ ಕಲ್ಲಿನ ಕೆಲಸ. ವಿಶೇಷವಾಗಿ ಇದೊಂದು ಕಲ್ಲಿನ ದ್ವಾರವಾಗಿದ್ದು, ಮೈಸೇನಿಯನ್ ವಾಸ್ತುಶಿಲ್ಪವನ್ನು ಹೋಲುತ್ತದೆ.
ಮೌರ್ಯ ಸಾಮ್ರಾಜ್ಯಕ್ಕೂ ಮುಂಚಿತವಾಗಿದ್ದ ಈ ರಚನೆಯು ಪ್ರಸ್ತುತ ಪಾಳು ಬಿದ್ದಿದ್ದರಾದರೂ ಸಹ ತನ್ನ ಪುರಾತನ ವೈಭವವನ್ನು...
ಸೋನ್ಭಂದರ್ ಗುಹೆ ವೈಭವಯುತವಾದ ಹಾದಿ ಕಂಡಿದೆ ಮತ್ತು ಅನೇಕ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. ಇದು ಎರಡು ಗುಹೆಗಳನ್ನು ಒಳಗೊಂಡಿದೆ. ಒಂದು ಸಿಬಂದಿ ಕೊಠಡಿ ಇನ್ನೊಂದು ನಿಧಿ ಕೊಠಡಿ ಎನ್ನಲಾಗಿದೆ. ಬಿಂಬಸಾರನ ನಿಧಿ ಇಲ್ಲಿ ಇನ್ನೂ ನಾಶವಾಗದೇ ಉಳಿದಿದೆ ಎನ್ನಲಾಗುತ್ತದೆ. ಈ ಗುಹೆಯು ಬಿಂಬಸಾರನ ಐತಿಹಾಸಿಕ ಸಂಸ್ಥೆಗಳ ದೊಡ್ಡ...
ಅಜಾತಶತ್ರು ಕೋಟೆಯನ್ನು ಮಗಧಾದ ಆಡಳಿತ ಕಾಲದಲ್ಲಿ ಅಜಾತಶತ್ರು ನಿರ್ಮಿಸಿದನು. ಈ ಕೋಟೆ ಸುಂದರವಾಗಿದ್ದು ಭೇಟಿ ಮಾಡಲು ಯೋಗ್ಯವಾದ ಸ್ಥಳವಾಗಿದೆ.
ವಿಶ್ವಶಾಂತಿ ಸ್ತೂಪ ಅಥವಾ ಶಾಂತಿ ಪಗೋಡ ಎಂದು ಕರೆಯಲ್ಪಡುವ ಈ ಸ್ತೂಪ ಐತಿಹಾಸಿಕ ಖಂಬ. ಇದು ರಾಜಗಿರಿ ಬೆಟ್ಟದ ತುತ್ತ ತುದಿಯಲ್ಲಿದ್ದು,400 ಮೀಟರ್ ಎತ್ತರದಲ್ಲಿದೆ.ಈ ಸ್ತೂಪವು ಅಮೃತ ಶಿಲೆಯಲ್ಲಿ ಕೆತ್ತಲ್ಪಟ್ಟಿದೆ ಮತ್ತು ವಿಶ್ವ ಶಾಂತಿಯ ಪ್ರತೀಕವಾಗಿದ್ದು,ಬುದ್ಧನ 4 ಬಂಗಾರದ ಮೂರ್ತಿ ಒಳಗೊಂಡಿದೆ.ಈ ಬೆಟ್ಟದ ತುದಿಯನ್ನು ಹಗ್ಗದ...
ಬಿಂಬಸಾರ ಜೈಲು ಗ್ರಿದ್ಧಕೂಟ ಬೆಟ್ಟದ ಸುಂದರ ದೃಶ್ಯವನ್ನು ತೋರಿಸುತ್ತದೆ. ಅಲ್ಲದೆ ಜಪಾನೀ ಪಗೋಡವನ್ನು ಹೊಂದಿದೆ. ಬುದ್ಧನ ಕಟ್ಟಾ ಅನುಯಾಯಿಯಾದ ಬಿಂಬಸಾರ ಮಗ ಅಜಾತಶತ್ರುವಿನಿಂದ ಬಂಧಿಸಲ್ಪಟ್ಟನು. ಆಗ ಅಜಾತಶತ್ರು ಯಾವ ಜಾಗ ಬೇಕು ಎಂದು ಕೇಳಿದಾಗ ಬಿಂಬಸಾರ ತನ್ನನ್ನು ಬುದ್ಧನ ವಿಗ್ರಹ ಕಾಣುವ ಈ ಜಾಗದಲ್ಲಿ ಬಂದಿಸುವಂತೆ...
ರಥ ಮಾರ್ಗ ಕಲ್ಲುಗಳನ್ನು ಕೆತ್ತಿ ಎರಡು ಮಾರ್ಗಗಳನ್ನು ಮಾಡಲಾಗಿದ್ದು ಕಲ್ಲಿನಲ್ಲಿ 30 ಅಡಿ ಕೆತ್ತಿರುವ ಈ ಮಾರ್ಗ ನೋಡಲು ಯೋಗ್ಯವಾದ ಸ್ಥಳ. ಸಾಕಷ್ಟು ಜನರು ಇದನ್ನು ಕೃಷ್ಣನ ರಥದ ಮಾರ್ಗ ಎಂದು ನಂಬುತ್ತಾರೆ. ಸ್ಥಳದ ರಹಸ್ಯವನ್ನು ಉದ್ದೀಪನಗೊಳಿಸಲು ಕ್ರಿ,ಶ 1 ರಿಂದ 5 ನೇ ಶತಮಾನದಲ್ಲಿ ಗೂಡ ಮಾರ್ಗವನ್ನು ಕಲ್ಲಿನಲ್ಲಿ...
ಜರಾಸಂದ ಕಾ ಅಖಾರ ಒಂದು ಯುದ್ಧ ಭೂಮಿ. ಹೆಸರೇ ಹೇಳುವಂತೆ ಮಘದಾನ ರಾಜ ಜರಾಸಂದನಿಗೆ ಸಂಬಂಧಿಸಿದ್ದು. ಈ ಯುದ್ಧ ಭೂಮಿ ಭೀಮ ಮತ್ತು ಜರಾಸಂದನ ನಡುವೆ ನಡೆದ ಯುದ್ಧದ ಚಿಹ್ನೆಯಾಗಿದೆ.
ಈ ಉದ್ಯಾನವನ ರಾಜ ಅಜಾತಶತ್ರು ಮತ್ತು ರಾಜ ಬಿಂಬಸಾರನ ಸಮಯದಲ್ಲಿ ವೈದ್ಯನಾಗಿದ್ದ ಜೀವಿಕ ನ ಗೌರವಾರ್ಥ ಉದ್ಯಾನವನವಾಗಿದೆ. ಬುದ್ಧ ಕೂಡ ಒಂದು ಕಾಲದಲ್ಲಿ ಜೀವಿಕನ ಸಲಹೆ ಪಡೆಯುತ್ತಿದ್ದ ಎಂದು ನಂಬಲಾಗಿದೆ.
ಕರಂಡ ಟ್ಯಾಂಕ್ ಮೌರ್ಯರ ವೈಭವಯುತ ಜೀವನವನ್ನು ಮತ್ತು ಪ್ರತಿಭಾ ಪೂರ್ಣ ರಚನೆಗಳ ಬಗ್ಗೆ ತಿಳಿಸುತ್ತದೆ.ಪುರಾಣಗಳ ಪ್ರಕಾರ ದೇವರು ಮತ್ತು ಬುದ್ಧ ಈ ಸ್ಥಳಕ್ಕೆ ಭೇಟಿ ನೀಡಿದಾಗ ಇಲ್ಲಿ ಸ್ನಾನ ಮಾಡುತ್ತಿದ್ದರು.
ಹಲವಾರು ವರ್ಷಗಳಿಂದ ರಾಜಗೀರ್ಜೈನರ ಯಾತ್ರಾಸ್ಥಳವಾಗಿದೆ. ಇದು ಪಂಚ ಪಹಾಡಿ ಎಂದು ಕೂಡ ಹೆಸರುವಾಸಿಯಾಗಿದೆ. ಅನೇಕ ಸಂತರು ಮುಕ್ತಿ ಮತ್ತು ಪ್ರಾಯಶ್ಚಿತ್ತಕ್ಕಾಗಿ ಭೇಟಿ ನೀಡಿದ ಸ್ಥಳ ಇದಾಗಿದೆ. ಜೈನರ ಸಂಸ್ಥಾಪಕ ಮಹಾವೀರ ಕೂಡ ಅನೇಕ ಭಾರಿ ಈ ದೇವಾಲಯಗಳಿಗೆ ಭೇಟಿ ನೀಡಿದ್ದಾನೆ. ರಾಜಗೀರ್ನಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಒಟ್ಟು...
ಬಿಸಿ ನೀರಿನ ಬುಗ್ಗೆ ಇದನ್ನು ಬ್ರಹ್ಮ ಕುಂಡ ಎಂದು ಕರೆಯಲಾಗುತ್ತದೆ ಇದು ವೈಭವ ಬೆಟ್ಟದಲ್ಲಿದೆ. ಈ ಬಿಸಿ ನೀರಿನ ಬುಗ್ಗೆಗಳು ಸಪ್ತ ಧಾರೆ ಅಥವಾ ಏಳು ನದಿಗಳಿಂದ ಹರಿದು ಬರುತ್ತದೆ. ಈ ನೀರು ಅತಿ ಹೆಚ್ಚು ಬಿಸಿ ಎಂದರೆ 45 ಡಿಗ್ರಿ ಅಷ್ಟು ಉಷ್ಣಾಂಶ ಹೊಂದುತ್ತದೆ. ಇಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಸ್ನಾನ ಮಾಡಲು ಪ್ರತ್ಯೇಕ...
ಪಿಪ್ಪಲ ಗುಹೆಯು ವೈಭವ ಬೆಟ್ಟದಲ್ಲಿದೆ. ಇದು ನೈಸರ್ಗಿಕ ಗುಹೆಯಾಗಿದ್ದು ಇದನ್ನು ವಾಚ್ ಟವರ್ ಆಗಿ ಬಳಸುತ್ತಿದ್ದರು. ನಂತರ ಇದು ಬೌದ್ಧ ಸನ್ಯಾಸಿಗಳ ಸುರಕ್ಷಿತ ಸ್ಥಳವಾಗಿತ್ತು.