ಭಾರತ ಸರಕಾರದ ಅಧೀನದಲ್ಪಾಲಿರುವ ಪಾರಾದೀಪ್ ಪೋರ್ಟ್ ಟ್ರಸ್ಟ್ ನಡೆಸುತ್ತಿರುವ ಪಾರಾದೀಪ್ ಬಂದರು ಭಾರತದ ಪೂರ್ವ ಕರಾವಳಿಯಲ್ಲಿರುವ ಅತಿದೊಡ್ದ ಬಂದರುಗಳಲ್ಲಿ ಒಂದು. ಒರಿಸ್ಸಾದ ಪ್ರಮುಖ ಬಂದರಾಗಿರುವ ಇದನ್ನು ಸ್ಥಾಪಿಸಿದ್ದು ರಾಘವೇಂದ್ರ ಎಂಬುವವರು. ಇಲ್ಲಿ ಥರ್ಮಲ್ ಕಲ್ಲಿದ್ದಲು ಮತ್ತು ಕಬ್ಬಿಣದ ವ್ಯಾಪಾರ ವಹಿವಾಟು...
ವೈವಿಧ್ಯತೆಯಲ್ಲಿ ಏಕತೆಯನ್ನು ತೋರಿಸುವ ಪಾರಾದೀಪ್ ನ ಜಗನ್ನಾಥ ದೇವಸ್ಥಾನ ಭಾರತದ ಜಾತ್ಯತೀತತೆಗೆ ಒಂದು ಅದ್ಭುತ ಉದಾಹರಣೆ. ಪ್ರವೇಶ ದ್ವಾರದಲ್ಲಿ ಇರುವ 60 ಅಡಿ ಎತ್ತರದ ಅರುಣ ಸ್ತಂಭ ಮತ್ತು ಅದರ ಮೇಲೆ ಇರುವ ಸಿಮೆಂಟಿನ ಕಮಾನು ದೇವಸ್ಥಾನಕ್ಕೆ ಸೊಬಗನ್ನು ತಂದಿದೆ. ಇದರಲ್ಲಿ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಮತ್ತು ಸಿಖ್...
ಬಂಗಾಳಕೊಲ್ಲಿಯಲ್ಲಿ ಮಹಾನದಿ ಸಮಾಗಮವಾಗುವ ಕೂಟದಲ್ಲಿ ಆಕರ್ಷಕ ಕಡಲತೀರವಿದೆ. ಇದು ಕಟಕ್ ನಿಂದ ಕೇವಲ 94 ಕಿ.ಮೀ. ಮತ್ತು ದೇಗುಲಗಳ ನಗರಿ ಭುವನೇಶ್ವರದಿಂದ 125 ಕಿ.ಮೀ. ದೂರದಲ್ಲಿದೆ. ಹತ್ತಿರದ ಕಟಕ್ ರೈಲು ನಿಲ್ದಾಣದಿಂದ ಅಥವಾ ಅಲ್ಲಿನ ಬಸ್ಸುಗಳಿಂದ ಅಥವಾ ಭುವನೇಶ್ವರದ ವಿಮಾನ ನಿಲ್ದಾಣದಿಂದ ಬೀಚನ್ನು ತಲುಪಬಹುದು. ನವೆಂಬರ್...
1999ರಲ್ಲಿ ಬೀಸಿದ ಪ್ರಚಂಡ ಬಿರುಗಾಳಿಗೆ ಸಿಲುಕಿ ಸಾವಿಗೀಡಾದ ಸಾವಿರಾರು ಜನರಿಗೆ ಸ್ಮೃತಿ ಉದ್ಯಾನವನವನ್ನು ಸಮರ್ಪಿಸಲಾಗಿದೆ. ಸರ್ವನಾಶ ಮಾಡಿದ ಬಿರುಗಾಳಿಗೆ ಹತರಾದ ಅಮಾಯಕ ಜನರ ನೆನಪಿಗಾಗಿ ನಿರ್ಮಿಸಿರುವ ಈ ಉದ್ಯಾನವನ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಹಲವು ಬಗೆಯ ಬಣ್ಣದ ಹೂವುಗಳಿಂದ ನಳನಳಿಸುವ ಪಾರ್ಕ್ ಪ್ರವಾಸಿಗರನ್ನು...
40 ಮೀಟರ್ ಎತ್ತರವಿರುವ ವೃತ್ತಾಕಾರದ ದೀಪಸ್ತಂಭ ಗೋಪುರವನ್ನು ಸಾಯಂಕಾಲದ ಸಮಯದಲ್ಲಿ ಸಂದರ್ಶಿಸಬಹುದು. 1960ರಲ್ಲಿ ಉದ್ಘಾಟಿಸಲಾದ ಪಾರಾದೀಪ್ ಬಂದರಿ ತೀರ ಅವಶ್ಯಕವಾಗಿದ್ದ ದೀಪಸ್ತಂಭವನ್ನು 1987ರಲ್ಲಿ ಸ್ಥಾಪಿಸಲಾಯಿತು. ಮರುವರ್ಷ ನವದೆಹಲಿಯ ಮೆ.ಏಷ್ಯಾ ನ್ಯಾವಿಗೇಷನ್ ಏಡ್ಸ್ ಸಂಸ್ಥೆ ಈ ದೀಪಸ್ತಂಭಕ್ಕೆ ತ್ರೀ-ಪ್ಯಾನಲ್...
ಇಲ್ಲಿನ ಮತ್ಯಾಗಾರದಲ್ಲಿ ಹಲವಾರು ತಳಿಯ ಮೀನುಗಳಿವೆ. ಮೀನುಗಳು ಅದೆಷ್ಟು ವೈವಿಧ್ಯಮಯವಾಗಿವೆಯೆಂದರೆ ನಿಮ್ಮ ಕಣ್ಣನ್ನು ನಂಬಲು ನಿಮಗೇ ಸಾಧ್ಯವಿಲ್ಲ. ಇಲ್ಲಿನ ಸೀ ಫುಡ್ ಮಾತ್ರವಲ್ಲ ಫಿಶ್ ಗಳು ಕೂಡ ಅಷ್ಟೇ ಪ್ರಸಿದ್ಧ.
ಮತ್ಯಾಗಾರದಲ್ಲಿ ಒಟ್ಟು 28 ಬಗೆಬಗೆಯ ಮತ್ಯಗಳಿರುವ ಟ್ಯಾಂಕ್ ಗಳಿವೆ. ಅಂದವಾಗಿ ವಿಹಸಿರುವ ಕಡಲು...