1999ರಲ್ಲಿ ಬೀಸಿದ ಪ್ರಚಂಡ ಬಿರುಗಾಳಿಗೆ ಸಿಲುಕಿ ಸಾವಿಗೀಡಾದ ಸಾವಿರಾರು ಜನರಿಗೆ ಸ್ಮೃತಿ ಉದ್ಯಾನವನವನ್ನು ಸಮರ್ಪಿಸಲಾಗಿದೆ. ಸರ್ವನಾಶ ಮಾಡಿದ ಬಿರುಗಾಳಿಗೆ ಹತರಾದ ಅಮಾಯಕ ಜನರ ನೆನಪಿಗಾಗಿ ನಿರ್ಮಿಸಿರುವ ಈ ಉದ್ಯಾನವನ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಹಲವು ಬಗೆಯ ಬಣ್ಣದ ಹೂವುಗಳಿಂದ ನಳನಳಿಸುವ ಪಾರ್ಕ್ ಪ್ರವಾಸಿಗರನ್ನು ಯಾವತ್ತೂ ಸ್ವಾಗತಿಸುತ್ತಿರುತ್ತದೆ.
ಅದ್ಭುತವಾಗಿ ಕೆತ್ತಲಾಗಿರುವ ಕಲ್ಲಿನ ಕಲಾಕೃತಿಗಳು ಉದ್ಯಾನವನದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಸಂಗೀತ ಕಾರಂಜಿ ನಿಮ್ಮಲ್ಲಿ ಬಿರುಗಾಳಿ ದುರಂತದ ನೆನಪನ್ನು ತಂದು ಆರ್ದ್ರತೆಯನ್ನು ಉಕ್ಕಿಸುತ್ತದೆ ಮತ್ತು ನಿಮ್ಮ ಹೃದಯವನ್ನೇ ಕದಡುತ್ತದೆ. ನವೆಂಬರ್ ನಿಂದ ಮಾರ್ಚ್ ವರೆಗಿನ ಕಾಲದಲ್ಲಿ ಹೂವುಗಳು ತಮ್ಮ ಸಂಪೂರ್ಣ ಸೌಂದರ್ಯವನ್ನು ಪ್ರದರ್ಶಿಸುತ್ತಿರುತ್ತವೆ. ಇಲ್ಲಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು.