ಈ ದೇವಸ್ಥಾನವು ನಾಥದ್ವಾರಾದ ಪ್ರಮುಖ ಆಕರ್ಷಣೆ. ಇದು ಇಲ್ಲಿನ ಕಂಕ್ರೊಲಿ ಹಳ್ಳಿಯಲ್ಲಿ ನೆಲೆಸಿದೆ. ಈ ದೇವಸ್ಥಾನವು, ವೈಷ್ಣವರು ಮತ್ತು ವಲ್ಲಭಾಚಾರ್ಯ ಪಂಗಡದವರಿಗೆ ಸಂಬಂಧಿಸಿದೆ. ಕೃಷ್ಣನಿಗೆ ಅರ್ಪಿತವಾಗಿರುವ ಈ ದೇವಸ್ಥಾನದಲ್ಲಿಯ ಕೆಂಪು ಬಣ್ಣದ ಮೂಲ ವಿಗ್ರಹವು ಮಥುರಾದಿಂದ ತರಿಸಲ್ಪಟ್ಟಿದೆ ಎಂದು ನಂಬಲಾಗಿದೆ.
ಇನ್ನು ಪಕ್ಷಿಪ್ರಿಯರು ಇಲ್ಲಿಗೆ ಹತ್ತಿರದಲ್ಲಿರುವ ನವಚೌಕಿ ಡ್ಯಾಮ್ ಅಥವಾ ಕಂಕ್ರೊಲಿ ಡ್ಯಾಮ್ ಗೆ ತೆರಳಿ ವಿವಿಧ ಹಕ್ಕಿಗಳನ್ನು ನೋಡಬಹುದಾಗಿದೆ.