ಇಲ್ಲಿರುವ ಟಿಪ್ಪುವಿನ ಬೇಸಿಗೆ ಅರಮನೆ ಮತ್ತು ಕೋಟೆಯನ್ನು ಸುತ್ತಿ ಟಿಪ್ಪುವಿನ ಆಳ್ವಿಕೆಯ ಕುರುಹುಗಳನ್ನು ಇಲ್ಲಿ ನೋಡಬಹುದು. ಇದು 90 ಎಕರೆಗಳ ಜಾಗದಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಸಮುದ್ರ ಮಟ್ಟದಿಂದ 4851 ಅಡಿಗಳಷ್ಟು ಎತ್ತರದಲ್ಲಿದೆ. ಈ ಕೋಟೆಯು ಶ್ರೀ ರಂಗ ಪಟ್ಟಣದ ದರಿಯಾದೌಲತ್ ಕೋಟೆಯಂತೆ ನಿರ್ಮಾಣಗೊಂಡಿದೆ.ಈ ಕೋಟೆಯನ್ನು ಚಿಕ್ಕಬಳ್ಳಾಪುರದ ಪ್ರಧಾನ ಪ್ರಮುಖರು 1791 ರಲ್ಲಿ ಪೂರ್ಣಗೊಳಿಸಿ ಟಿಪ್ಪು ಸುಲ್ತಾನ್ ನಗೆ ಸಮರ್ಪಿಸಿದರು. ಇದು ಟಿಪ್ಪು ಸುಲ್ತಾನನ ಬೇಸಿಗೆ ಕಾಲದ ಸಮಯ ಕಳೆಯಲೆಂದು ಅತೀ ಸುಂದರವಾಗಿ ಅರಮನೆಯನ್ನು ನಿರ್ಮಿಸಲಾಗಿದ್ದರಿಂದ ಟಿಪ್ಪು ಸುಲ್ತಾನ ನನು ಇದಕ್ಕೆ ‘ತಾಶ್ಕ್ ಎ ಜನ್ನತ್ ' ಅಂದರೆ ‘ ಸ್ವರ್ಗಕ್ಕೆ ಈರ್ಷ್ಯೆ ತರುವಂತಹುದು' ಎಂದು ಹೇಳುತ್ತಿದ್ದನಂತೆ.ಈ ಅರಮನೆಯ ಇನ್ನೊಂದು ವಿಶೇಷವೆಂದರೆ ಇದು ಸಂಪೂರ್ಣ ಮರದಿಂದ ಕಟ್ಟಲ್ಪಟ್ಟಿದೆ. ಗೋಪುರಗಳು ಮತ್ತು ಕಮಾನುಗಳ ಮೇಲೆ ಆ ಕಾಲದ ವಾಸ್ತು ಶೈಲಿಯನ್ನು ಬಿಂಬಿಸುವ ಸುಂದರ ಕೆತ್ತನೆ ಕಾಣಬಹುದು. ಇನ್ನು ಅರಮನೆಯ ಛಾವಣಿ ಮತ್ತು ಗೋಡೆಗಳನ್ನು ವಿವಿಧ ಕಲಾಕೃತಿಗಳಿಂದ ಅಲಂಕರಿಸಲಾಗಿದೆ. ಈ ಅರಮನೆಯ ವೈಶಿಷ್ಟ್ಯತೆ ಎಂದರೆ ಐದು ಕಮಾನುಗಳು. ಆದರೆ ಅರಮನೆ ಒಳಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಹೊರಗಿನಿಂದಲೇ ಅರಮನೆ ಸೌಂದರ್ಯವನ್ನು ಪ್ರವಾಸಿಗರು ಸವಿಯಬಹುದು.


Click it and Unblock the Notifications