ಮುರುಡೇಶ್ವರದ ಚಿತ್ರಮಯ ಸ್ಥಳಗಳಲ್ಲಿ ಒಂದು ಮುರುಡೇಶ್ವರ ಸಮುದ್ರ , ಇದುವು ಅರೆಬಿಯನ್ ಸಮುದ್ರ ಹಾಗೂ ಗಿರಿಶಿಖರಗಳಿಂದ ಸುತ್ತುವರೆದಿದೆ.ದಂತಕಥೆಗಳ ಮೂಲಗಳ ಪ್ರಕಾರ ರಾವಣನು ಪ್ರಾಣಲಿಂಗದ ಒಂದು ಚೂರನ್ನು ಎಸೆದ ಪರಿಣಾಮ ಮುರುಡೇಶ್ವರದ ಜಲವು ಪವಿತ್ರತೆಯನ್ನು ಹೊಂದಿತು ಎಂಬುದು ಇಲ್ಲಿನ ನಂಬಿಕೆ .ಈ ಸರೋವರದ ಒಂದು ದಿಬ್ಬದ ಮೇಲಿಹ ಮುರುಡೇಶ್ವರ ಪುಣ್ಯಸ್ಥಳದಿಂದಲೂ ಪ್ರಸಿದ್ಧವಾಗಿದೆ. ಪ್ರವಾಸಿಗರಿಗೆ ಈ ಜಾಗವನ್ನು ನೋಡಲೆ ಬೇಕಾದ ಪ್ರಮುಖ ಕಾರಣವೆಂದರೆ ಇಲ್ಲಿ ಕಂಡುಬರುವ ವಿಶೇಷವಾದ ಸಾಂಸ್ಕೃತಿಕ ಆಚರಣೆಗಳಾದ ಕಂಬಳ ಎಂದೇ ಕರೆಯಲ್ಪಡುವ ಎಮ್ಮೆಯ ಓಟ,ಕೋರಿಕಟ್ಟ ಹಾಗೂ ಭೂತ ಪೂಜಾ ಇವುಗಳನ್ನು ಆಚರಿಸುತ್ತಾರೆ.ಪ್ರವಾಸಿಗರು ಮುರುಡೇಶ್ವರ ದೇವಾಲಯದಲ್ಲಿ ಸ್ಥಾಪಿಸಿರುವ ಬೃಹತ್ತಾದ ಶಿವನ ಪ್ರತಿಮೆಯನ್ನು ಸಮುದ್ರದಿಂದಲೂ ಕಾಣಬಹುದು.ಪ್ರವಾಸಿಗರು ಹಲವು ಜಲ ಚಟುವಟಿಕೆಗಳಾದ ಮೀನುಗಾರಿಕೆ,ದೋಣಿ ವಿಹಾರ ಹಾಗೂ ಈಜು ಇವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು.ಅದಲ್ಲದೆ ಈ ಸರೋವರವು ಸೂರ್ಯಸ್ನಾನಕ್ಕೆ ಹೇಳಿಮಾಡಿಸಿದ ಸ್ಥಳವಾಗಿದೆ.ಪ್ರವಾಸಿಗರಿಗೆ ಸಮಯವಿದ್ದಲ್ಲಿ ಈ ಸ್ಥಳವನ್ನು ವರ್ಷಪೂರ್ತಿ ಯಾವುದೇ ಸಮಯದಲ್ಲಿ ಬಂದು ನೋಡಬಹುದು.