ಮುರುಡೇಶ್ವರಕ್ಕೆ ಭೇಟಿ ಕೊಡುವ ಪ್ರವಾಸಿಗರು ಸಮಯವಿದ್ದಲ್ಲಿ ಹಾಗೆಯೇ ಮುನ್ನೆಡೆದರೆ ಸಿಗುವ ಶಿವನ ಬೃಹತ್ ಪ್ರತಿಮೆಯನ್ನು ನೋಡಲು ತೆರಳಬಹುದು.ಈ ಪ್ರತಿಮೆಯೂ 123 ಅಡಿಗಳ ಉದ್ದಳತೆಯನ್ನು ಹೊಂದಿದ್ದು ಜಗತ್ತಿನಲ್ಲಿ ಅತಿ ದೊಡ್ಡ ಪ್ರತಿಮೆಗಳ ಪಟ್ಟಿಯಲ್ಲಿದೆ.ಈ ಪ್ರತಿಮೆಯನ್ನು ಪೂರ್ಣಗೊಳಿಸಲು ಎರಡು ವರ್ಷಗಳು ತೆಗೆದುಕೊಂಡಿದ್ದು ಇದಕ್ಕೆ ಸಂಪೂರ್ಣವಾದ ಧನಸಹಾಯ ಮಾಡಿದವರು ಓರ್ವ ವ್ಯವಹಾರಿ ಮತ್ತು ಲೋಕೋಪಕಾರಿಯೂ ಆದ ಆರ್.ಎನ್ ಶೆಟ್ಟಿ ರವರು ಹಾಗೂ ಇದನ್ನು ನಿರ್ಮಿಸಿದವರು ಶಿವಮೊಗ್ಗದ ಕಾಶೀನಾಥ್ ಮತ್ತು ಅವರ ಪುತ್ರ ರಾದ ಶ್ರೀಧರ್.
ಈ ದೇವಾಲಯದ ಮೇಲೆ ದಾನಿಗಳು ವೆಚ್ಚಮಾಡಿದ ಖರ್ಚಿನ ಅಂದಾಜು ಮೊತ್ತ 5 ಕೋಟಿ ರೂ ಗಳು. ಈ ಪ್ರತಿಮೆಯ ನಿರ್ಮಾಣದಲ್ಲಿನ ವಿಶೇಷತೆಯೆಂದರೆ ಸೂರ್ಯನ ಕಿರಣಗಳು ನೇರವಾಗಿ ಇದರ ಮೇಲೆ ಬಿದ್ದು ಮೂರುತಿಗೆ ಹೊಳೆಯುವ ರೂಪವನ್ನು ತಂದುಕೊಡುತ್ತದೆ.ಮೊತ್ತಮೊದಲು ಈ ಪ್ರತಿಮೆಗೆ ಹೊನ್ನಿನ ಬಣ್ಣದಿಂದ ಲೇಪಿಸಿದ್ದ ಚತುರ್ಭುಜವನ್ನು ಕಾಣಬಹುದಾಗಿತ್ತು .ಆದರೆ ಮಾರುತಗಳಿಗೆ ಸಿಲುಕಿ ಢಮರುಗವನ್ನು ಹೊಂದಿದ್ದ ಕೈಯೊಂದು ಹೊಡೆದುರುಳಿತು ಹಾಗೆಯೇ ಮಳೆಯ ಪರಿಣಾಮದಿಂದ ಲೇಪಿಸಿದ ಬಣ್ಣವು ಕರಗಿಹೋಗಿದೆ.