ಭಗವಾನ್ ಗಣೇಶನ ನೆಲೆಯಾದ ಈ ಪ್ರಸಿದ್ಧ ಹಿಂದೂ ದೇವಾಲಯಕ್ಕೆ 1900 ಇಸವಿಗಿಂತ ಮೊದಲಿನಿಂದಲೂ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದಾರೆ. ಕೇವಲ ಇಟ್ಟಿಗೆಯಿಂದ ಕೆಲವೆ ಅಡಿ ವಿಸ್ತಾರದಲ್ಲಿ ನಿರ್ಮಿಸಲಾಗಿದ್ದ ಈ ದೇವಾಲಯ, ಇಂದು ಮುಂಬೈನ ಅತಿ ಶ್ರೀಮಂತ ದೇವಾಲಯವೆನಿಸಿದ್ದು, ಹಲವರ ಹೃದಯದಲ್ಲಿ/ಮನಸ್ಸಿನಲ್ಲಿ ನೆಲೆಯಾಗಿದೆ. ವಿಶೇಷ ಸೂಚನೆಯೆಂದರೆ, ನೀವು ಸರಿಯಾದ ಸಮಯಕ್ಕೆ, ಸರಿಯಾದ ದಿನ ಇಲ್ಲಿಗೆ ಭೇಟಿ ನೀಡದಿದ್ದರೆ ಇಲ್ಲಿನ ಸಾಲುಗಟ್ಟಿದ ಜನಸಂದಣಿಯಲ್ಲಿ ದಿನವಿಡಿ ನಿಲ್ಲಬೇಕಾದೀತು! ಅಷ್ಟು ಭಾರಿ ಮೊತ್ತದ ಜನ ಸಾಗರ ಈ ದೇವಾಲಯದ ಮುಂದೆ ಪ್ರತಿ ದಿನ ಇರುತ್ತದೆ. ಇಲ್ಲಿನ ವಾಸ್ತು ಶೈಲಿ ಹಾಗೂ ಯಾತ್ರಾರ್ಥಿಗಳ ನಿರ್ವಹಣೆ ಅಚ್ಚುಕಟ್ಟಾಗಿದೆ.
ಸಿದ್ಧಿ ವಿನಾಯಕ ದೇವಸ್ಥಾನವು, ವರ್ಲಿ ಸಮುದ್ರಾಭಿಮುಖವಾಗಿ ನೆಲೆಸಿದ್ದು, ಹಾಜಿ ಅಲಿ ಜ್ಯೂಸ್ ಸೆಂಟರ್ ನಂತಹ ಮುಂಬೈ ನಗರದ ಹಲವಾರು ಆಕರ್ಷಣಾ ಸ್ಥಳಗಳಿಗೆ ಅತ್ಯಂತ ಹತ್ತಿರದಲ್ಲಿದೆ.