ಮೇಡಕ್ನಲ್ಲಿರುವ ಪ್ರಮುಖ ದೇವಾಲಯಗಳ ಸಾಲಿನಲ್ಲಿ ಎಡುಪಾಯಲ ದುರ್ಗಾ ಭವಾನಿ ಗುಡಿಯೂ ಕೂಡ ಒಂದಾಗಿದೆ. ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಗಡಿ ಪ್ರದೇಶದಲ್ಲಿ ಈ ಸುಂದರ ದೇವಾಲಯ ನೆಲೆಗೊಂಡಿದೆ. ದುರ್ಗಾದೇವಿಯ ಶಕ್ತಿಕೇಂದ್ರ ಎಂದು ಕರೆಯಲ್ಪಡುವ ಈ ದೇವಾಲಯದ ಕಲ್ಲಿನ ರಚನೆಗಳು ಅನನ್ಯ ಅನುಭವವನ್ನು ನೀಡುತ್ತದೆ. ಮಂಜೀರಾ ನದಿ ಈ ಸ್ಥಳದಲ್ಲಿ ಏಳು ಕವಲಲುಗಳಾಗಿ ಹರಿಯುತ್ತದೆ. ತೆಲುಗಿನಲ್ಲಿ ಎಡುಪಾಯಲು ಅಂದರೆ ಏಳು ಹೊಳೆಗಳು ಎಂದು ಅರ್ಥ. ಮಂಜೀರಾ ನದಿಯ ಹಿಂದೆ ದಂತಕಥೆಯೊಂದು ಚಾಲ್ತಿಯಲ್ಲಿದೆ. ಅರ್ಜುನನ ಮೊಮ್ಮಗ ಜನಮೇಜಯ ತಂದೆಯ ಶಾಪದಿಂದ ಮುಕ್ತವಾಗುವ ಸಲುವಾಗಿ ಸರ್ಪಯಾಗವನ್ನು ಕೈಗೊಳ್ಳುತ್ತಾನೆ. ಇಲ್ಲಿನ ದೇವಾಲಯದಲ್ಲಿ ಕೈಗೊಂಡಿದ್ದ ಆ ಸರ್ಪಯಾಗದ ಪವಿತ್ರ ಭಸ್ಮವನ್ನು ಮಂಜೀರಾ ನದಿಯ ತಳದಲ್ಲಿ ಹೂಳಿಡಲಾಗಿದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಇಲ್ಲಿ ಯಾವಾಗಲೂ ಜನಸಂದಣಿ ಇದ್ದು, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಿಂದಲೂ ಪ್ರತೀ ವರ್ಷ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಶಿವರಾತ್ರಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ.