ಶ್ರೀ ರಾಮಚಂದ್ರನ ದೇವಾಲಯವು ಹಿಮಾಚಲ್ ಪ್ರದೇಶದ ಮನಿಕರನ್ನಲ್ಲಿರುವ ಪ್ರಸಿದ್ಧ ಸ್ಥಳವಾಗಿದೆ. ಇದು ರಾಜ ಜಗತ್ ಸಿಂಗ್ರಿಂದ ಸುಮಾರು 17ನೇ ಶತಮಾನದಲ್ಲಿ ನಿರ್ಮಾಣಗೊಂಡಿತು. ದಂತಕತೆಗಳ ಪ್ರಕಾರ, ಸ್ವಾಮಿ ರಾಮಚಂದ್ರನು ಈ ದೇವಾಲಯವನ್ನು ಅಯೋಧ್ಯೆಯಿಂದ ಮನಿಕರನ್ಗೆ ಸ್ಥಳಾಂತರಿಸಿದನಂತೆ.
ಈ ದೇವಾಲಯದ ಇತಿಹಾಸವನ್ನು ಇಲ್ಲಿನ ಗೋಡೆಯಲ್ಲಿರುವ ಒಂದು ಕಲ್ಲಿನ ಮೇಲೆ ಕೆತ್ತಲಾಗಿದೆ. ಆದರೆ ಅದು ಇಂದು ಅಸ್ಪಷ್ಟವಾಗಿದ್ದು, ಓದಲು ಅಸಾಧ್ಯವಾಗಿದೆ. 1889 ರಲ್ಲಿ ರಾಜ ದಿಲೀಪ್ ಸಿಂಗ್ರವರು ಈ ದೇವಾಲಯದ ಜೀರ್ಣೋದ್ಧಾರ ಮಾಡಿದರು. ಪ್ರಸ್ತುತ ಈ ದೇವಾಲಯವು ಒಂದು ಟ್ರಸ್ಟ್ ನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ದೇವಾಲಯಕ್ಕೆ ಮೂರು ಹಜಾರಗಳು ಇವೆ. ಪ್ರವಾಸಿಗರು ಇಲ್ಲಿ ತಂಗಲು ಅನುಕೂಲವಾಗುವಂತೆ ದೇವಾಲಯದ ಆವರಣದಲ್ಲಿ ನಲವತ್ತು ಕೋಣೆಗಳಿವೆ.