ವಡಭಂಧೇಶ್ವರ , ಮಲ್ಪೆವಡಭಂಧೇಶ್ವರ ದೇವಾಲಯವು ತನ್ನ ಸಮೃದ್ದವಾದ ಕಲಾತ್ಮಕ ವಾಸ್ತುಶಿಲ್ಪಕ್ಕೆ ಪ್ರಸಿದ್ದವಾಗಿದ್ದು , ಮಲ್ಪೆ ಸರೋವರದ ದಂಡೆಯ ಮೇಲೆ ನೆಲೆಸಿದೆ . ಈ ದೇವಾಲಯದಲ್ಲಿ ಕಾಣಸಿಗುವುದು ಶ್ರೀ ಕೃಷ್ಣನ ಸಹೋದರನಾದ ಬಲರಾಮ. ಈ ದೇವಾಲಯವು ಅನಂತೇಶ್ವರ ದೇವಾಲಯವೆಂದೂ ಕರೆಯಲ್ಪಡುತ್ತದೆ . ಪ್ರಾಚೀನ ಕಥೆಗಳ ಪ್ರಕಾರ ಈ ದೇವಾಲಯದಲ್ಲಿ ಆರಾಧಿಸಲ್ಪಡುವ ಮೂರುತಿಯನ್ನು ಶ್ರೀ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ್ದರು. ಹಿಂದೂ ಭಕ್ತಾದಿಗಳು ಸಾಮಾನ್ಯವಾಗಿ ಹುಣ್ಣಿಮೆ ಅಥವಾ ಮಹಾಲಯ ಅಮವಾಸ್ಯೆಯಂದು ದೇವಾಲಯಕ್ಕೆ ಭೇಟಿ ಕೊಟ್ಟು ಸರೋವರದಲ್ಲಿ ಮಿಂದು ಪ್ರಾರ್ಥನೆಗಳನ್ನು ಅರ್ಪಿಸುತ್ತಾರೆ . ವಡಭಂಧೇಶ್ವರ ದೇವಾಲಯವು ಉಡುಪಿಯಿಂದ ಪಶ್ಚಿಮದ ಕಡೆಗೆ ೪ ಮೈಲಿ ದೂರದಲ್ಲಿ ಸಿಗುತ್ತದೆ. ನೀವು ಉಡುಪಿಯಿಂದ ರಸ್ತೆಯ ಮೂಲಕ ವಡಭಂಧೇಶ್ವರ ದೆಯವಲಯವನ್ನು ನಿಮಿಷಗಳಲ್ಲಿ ತಲುಪಬಹುದು . ನೀವು ಅದಲ್ಲದೆ ಬಸ್ , ಆಟೋ ರಿಕ್ಷಾ ಅಥವಾ ಟ್ಯಾಕ್ಸಿ ಸೌಲಭ್ಯದಿಂದಲೂ ಉಡುಪಿಯಿಂದ ಮಲ್ಪೆಗೆ ಪ್ರಯಾಣಿಸಬಹುದು.ಉಡುಪಿ ರೈಲ್ವೇ ನಿಲ್ದಾಣವು ಮಲ್ಪೆಗೆ ಬಹಳ ಹತ್ತಿರದಲ್ಲಿರುವ ರೈಲ್ವೇ ನಿಲ್ದಾಣ. ಮಲ್ಪೆಗೆ ಬರಲು ಶಿವಮೊಗ್ಗ , ಧರ್ಮಸ್ಥಳ ಹಾಗೂ ಇತರೆ ಪ್ರಮುಖ ಪಟ್ಟಣಗಳಿಂದಲೂ ನಿರಂತರ ಬಸ್ ಸೌಲಭ್ಯಗಳಿವೆ . ಪ್ರವಾಸಿಗರು ಹವಾ ನಿಯಂತ್ರಿತ ವಾಹನಗಳನ ಸಹಾಯದಿಂದಲೂ ಮಲ್ಪೆಗೆ ಬರಬಹುದು . ಹವಾಮಾನ