ಭೈರವನಾಥ ದೇವಸ್ಥಾನವು ಲೋಣಾವಲದ ಸಮೀಪದಲ್ಲಿರುವ ರಾಜ್ಮಾಚಿ ಧಕ್ನಲ್ಲಿದೆ. ಭೈರವನ ರೂಪದಲ್ಲಿರುವ ಶಿವನು ಇಲ್ಲಿನ ಪ್ರಮುಖ ದೇವರು. ಕೊಂಕಣ ಪ್ರದೇಶದ ಇತರೆಡೆ ಇರುವ ಶಿವ ದೇವಸ್ಥಾನದ ರೀತಿಯಲ್ಲೇ ಈ ದೇವಸ್ಥಾನವೂ ನಿರ್ಮಿತವಾಗಿದೆ.
ದೇವಸ್ಥಾನದ ಹಿಂದೆ ದಟ್ಟವಾದ ಅರಣ್ಯವಿದೆ. ಇಲ್ಲಿನ ನಿರ್ಜನ ಪ್ರದೇಶ ಪ್ರವಾಸಿಗರನ್ನು ಭಯಭೀತಗೊಳಿಸುತ್ತದೆ. ದೇವಸ್ಥಾನಕ್ಕೆ ತಲುಪುವುದು ಸುಲಭವಲ್ಲ. ಕಡಿದಾದ ದಾರಿಯನ್ನು ಬಳಸಿ ಹತ್ತಬೇಕು. ಮುಖ್ಯ ದೇವರ ವಿಗ್ರಹದ ಸುತ್ತಲೂ ಸಣ್ಣ ಸಣ್ಣ ದೇವಿ, ದೇವತೆಯರ ಮೂರ್ತಿಗಳನ್ನೂ ನೋಡಬಹುದು. ಮಹಾಶಿವರಾತ್ರಿಯಂದು ಇಲ್ಲಿ ಜನಪ್ರಿಯ ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಇಲ್ಲಿ ಸೇರುತ್ತಾರೆ.