ಮುಕುತ ಬಂದನ ಚೈತ್ಯಾ ಅಥವಾ ಮುಕ್ತ ಬಂದನ ವಿಹಾರ ಎಂದು ಕರೆಯಲ್ಪಡುವ ರಾಮಭಾರ್ ಸ್ತೂಪ ನಿರ್ವಾಣ ದೇವಾಲಯದ ಆಗ್ನೇಯ ದಿಕ್ಕಿಗೆ ಸುಮಾರು 1.5 ಕಿ ಮೀ ಅಂತರದಲ್ಲಿದೆ. ಈ ಸ್ತೂಪವನ್ನು ಜಗತ್ತಿನಾದ್ಯಂತ ಬೌದ್ಧ ಯಾತ್ರಿಕರು ಅತ್ಯಂತ ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಕ್ರಿ,ಪೂ 483 ರಲ್ಲಿ ಬುದ್ಧ ಮರಣಿಸಿದ ನಂತರ ಇದೆ ಜಾಗದಲ್ಲಿ ಅಂತ್ಯಸಂಸ್ಕಾರವನ್ನು ನೆರವೆರಿಸಲಾಯಿತು ಎನ್ನಲಾಗುತ್ತದೆ.
ಬೌದ್ಧ ಗ್ರಂಥದ ಪ್ರಕಾರ, ಈ ಸ್ತೂಪವನ್ನು ಮಲ್ಲ ರಾಜರು ಕಟ್ಟಿದರು ಎನ್ನಲಾಗಿದೆ. ಅದರ ರಚನೆಯ ವಿನ್ಯಾಸವು ಪ್ರಾಚೀನ ಐತಿಹಾಸಿಕ ಪಾತ್ರಕ್ಕೆ ಸಾಕ್ಷ್ಯವಾಗಿದೆ. ಕುಶಿನಗರ -ದೆಯೋರಿಯ ವಿರುದ್ಧದ ದಿಬ್ಬದ ಮೇಲೆ ಇದನ್ನು ಕಟ್ಟಲಾಗಿದೆ. ಇದನ್ನು ಇಟ್ಟಿಗೆಯಲ್ಲಿ ಕಟ್ಟಲಾಗಿದೆ. 47.24 ಮೀಟರ್ ನ ವೃತಾಕಾರದ ತಳಪಾಯವಿದ್ದು,14.9 ಮೀಟರ್ ಎತ್ತರದ ಸ್ತೂಪವಿದೆ. ಇದರ ಗುಮ್ಮಟಾಕಾರದ ತುದಿಯು 34.14 ಮೀಟರ್ ಇದೆ. ಇದು ಕೃಷಿ ಭೂಮಿಯ ಭಾಗದಲ್ಲಿ ಇದ್ದು ಇಲ್ಲಿ ಅಕ್ಕಿ,ಕಬ್ಬು ಮತ್ತು ಗೋಧಿ ಬೆಳೆಯ ಭೂಮಿಯನ್ನು ಕಾಣಬಹುದು. ಇದರ ಹತ್ತಿರದಲ್ಲೇ ಕೊಳವಿದೆ.


Click it and Unblock the Notifications