ಕುರುಡುಮಲೆಯ ಗಣಪತಿ ದೇವಾಲಯವು ಕರ್ನಾಟಕದಲ್ಲಿಯೇ ಅತ್ಯಂತ ಪವಿತ್ರವಾದುದು ಮತ್ತು ಅತ್ಯಂತ ಪ್ರಭಾವಶಾಲಿ ಎಂದು ಭಕ್ತಜನರ ನಂಬಿಕೆಯಾಗಿದೆ. ಈ ದೇವಾಲಯದ ಶೈಲಿ ಮತ್ತು ಇದರ ಗೋಡೆಗಳಲ್ಲಿ ಕೆತ್ತಲಾಗಿರುವ ಚಿಹ್ನೆಗಳು ಇದು ವಿಜಯನಗರದ ರಾಜರಿಂದ ನಿರ್ಮಿಸಲ್ಪಟ್ಟ ದೇವಾಲಯವೆಂದು ಖಚಿತಪಡಿಸುತ್ತದೆ. ದಂತಕಥೆಗಳ ಪ್ರಕಾರ ಇಲ್ಲಿನ ಗಣಪತಿ ಮೂರ್ತಿಯನ್ನು ತ್ರಿಮೂರ್ತಿಗಳು ಪ್ರತಿಷ್ಟಾಪಿಸಿದರು. ತ್ರಿಮೂರ್ತಿಗಳೆಂದರೆ ಹಿಂದು ದೇವತೆಗಳ ಸೃಷ್ಟಿಕರ್ತನಾದ ಬ್ರಹ್ಮ, ಸ್ಥಿತಿಕಾರಕ ಅಂದರೆ ಜಗತ್ ಪರಿಪಾಲಕನಾದ ವಿಷ್ಣುವು ಮತ್ತು ಲಯಕಾರಕನಾದ ಅಂದರೆ ವಿನಾಶಕಾರಕನಾದ ಮಹೇಶ್ವರನು ಈ ಮೂವರು ಇಲ್ಲಿನ ಸ್ತಳ ಪುರಾಣಗಳ ಪ್ರಕಾರ ಇಲ್ಲಿ ಗಣಪತಿ ಕುರಿತುಪೂಜೆ ಕೈಗೊಂಡರಂತೆ, ಆದರೆ ಈ ಮೂರ್ತಿಯನ್ನು ಯಾರು ಪ್ರತಷ್ಟಾಪಿಸಿದರು ಎಂಬ ಬಗ್ಗೆ ನೈಜ ಸಾಕ್ಷಗಳೇನು ಸಿಗುವುದಿಲ್ಲ.
ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದಂತಹ ಗಣೇಶನ ವಿಗ್ರಹವು ದೊಡ್ಡದಾಗಿದ್ದು 14 ಅಡಿ ಎತ್ತರವಾಗಿದೆ. ವಿಗ್ರಹವು ದೇವಸ್ಥಾನವಿಲ್ಲದೆ ಹಾಗೆಯೆ ನಿಂತಿದ್ದು ಕೃಷ್ಣದೇವರಾಯನ ಕಾಲದಲ್ಲಿ ದೇವಸ್ಥಾನದ ರೂಪ ಪಡೆಯಿತು. ಪ್ರತಿ ವರ್ಷವು ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಯಾತ್ರಿಗಳು ಇದನ್ನು ನೋಡಲು ಆಗಮಿಸುತ್ತಾರೆ.


Click it and Unblock the Notifications