ಕೋಟ್ಲಾ ವಿಜಯ ಭಾಸ್ಕರ ರೆಡ್ಡಿ ನೆನಪಿನ ಸ್ಮಾರಕವನ್ನು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯ ನೆನಪಿಗೆ ಅರ್ಪಿಸಲಾಗಿದೆ. ಇವರು ಮೂಲತಃ ಕರ್ನೂಲ್ ನವರಾಗಿದ್ದು ಕೇವಲ ಆಂದ್ರದಲ್ಲಷ್ಟೇ ಅಲ್ಲ ಇಡೀ ದೇಶದಲ್ಲಿಯೂ ಪ್ರಸಿದ್ದ ರಾಜಕಾರಣಿಯಾಗಿದ್ದರು. ದೊಡ್ಡ ಸಮೂಹವೊಂದರ ನಾಯಕನಾಗಿದ್ದ ಇವರನ್ನು ಜನ ಪ್ರೀತಿಸುತ್ತಿದ್ದರು ಮತ್ತು ಗೌರವಿಸುತ್ತಿದ್ದರು. ಇವರ ಹಿಂಬಾಲಕರು ಇವರನ್ನು ಕರೆಯುತ್ತಿದ್ದದ್ದು ಪೆದ್ದಾಯಣ ಅಂತ. ಈ ನೆನಪಿನ ಸ್ಮಾರಕ ಹಂದ್ರಿ ನದಿಯ ದಂಡೆಯಲ್ಲಿದ್ದು ಸದ್ಯ ಪ್ರಸಿದ್ದ ಪಿಕ್ನಿಕ್ ಸ್ಥಳವಾಗಿದೆ.


Click it and Unblock the Notifications